ರಾಜಕೀಯ ಲಾಭಕ್ಕೆ ಗಡಿವಿವಾದ ಎಂದು ಕರ್ನಾಟಕ (karnataka) , ಮಹಾರಾಷ್ಟ್ರ (Maharastra) ಸರ್ಕಾರದ ವಿರುದ್ದ ಡಿ.ಕೆ.ಶಿವಕುಮಾರ್ (DK.Shivakumar) ಆರೋಪಿಸಿದ್ದಾರೆ. ಗಡಿ ವಿಚಾರದಲ್ಲಿ ಎಲ್ಲರೂ ಕೂಡ ರಾಜಕಾರಣ ಮಾಡ್ತಿದ್ದಾರೆ. ಚುನಾವಣಾ ಹೊತ್ತಲ್ಲಿ ಶಾಂತಿ ಇರುವ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ಯಾವುದೇ ಪಕ್ಷವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಮಾಡ್ತಿರೋದು ತಪ್ಪು.
ನಮ್ಮ ರಾಜ್ಯದ ಸಿಎಂ ಅವರ ಸರ್ಕಾರದ ಮೇಲಿನ ಕೆಟ್ಟ ಹೆಸರನ್ನು ವಿಷಯಾಂತರ ಮಾಡೋಕೆ ದೊಡ್ಡದು ಮಾಡ್ತಿದ್ದಾರೆ. ಇದು ಆಗಲೇ ನಿರ್ಧಾರವಾಗಿರುವ ವಿಚಾರ. ಅವರದು ಗಡಿ ಅವರದು,ನಮ್ಮ ಗಡಿ ನಮ್ಮದು,ಇಲ್ಲಿರುವವರು ನಮ್ಮ ಜನ,ಅಲ್ಲಿರುವವರು ಅವರ ಜನ . ಭಾಷೆ ವಿಚಾರಕ್ಕೆ ಮಹಾರಾಷ್ಟ್ರ (Maharastra) ದಲ್ಲಿನ ಕನ್ನಡ ಶಾಲೆಗೆ ಅವರು ಪ್ರೋತ್ಸಾಹ ಕೊಡಬೇಕು. ಇಲ್ಲಿರುವ ಮರಾಠಿ ಶಾಲೆ (Marathi school) ಗಳಿಗೆ ನಾವು ಪ್ರೋತ್ಸಾಹ ಕೊಡಬೇಕು ಎಂದು ಹೇಳಿದ್ರು. ಅಕ್ಕಪಕ್ಕದ ವ್ಯಾಪಾರ,ವಹಿವಾಟುಗೆ ತೊಂದರೆಯಾಗಬಾರದು. ಸುವರ್ಣಸೌಧವನ್ನು ಕೂಡ ಬೆಳಗಾವಿಯಲ್ಲಿ ಕಟ್ಟಿದ್ದೇವೆ. ನಮ್ಮ ಶಾಂತಿಭಂಗಮಾಡುವ ಕೆಲಸ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ : – ಗಣಿ ಸಚಿವರ ಸ್ವ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು…!
ಬಿಜೆಪಿಗೆ ರೌಡಿಶೀಟರ್ ಗಳ ಸೇರ್ಪಡೆ ವಿಚಾರ
ಬಿಜೆಪಿ (BJP) ಯವರಿಗೆ ಕುಸ್ತಿ ಮಾಡಲು ಜನ ಬೇಕಲ್ಲ. ಕುಸ್ತಿ ಮಾಡಲು ಅವರ ಬಳಿ ಜನ ಇಲ್ಲ. ಕುಸ್ತಿ ಮಾಡಲು ಸೇರಿಸಿಕೊಳ್ಳುತ್ತಿದ್ದಾರೆ,ಸೇರಿಸಿಕೊಳ್ಳಲಿ. ಒಳ್ಳೆಯ ಮುಖ ಬೇಕಲ್ವಾ ಅವರಿಗೆ. ಬಿಜೆಪಿಗೆ ಯಾವ ಸಿದ್ದಾಂತವಿದೆ, ಏನು ಸಿದ್ದಾಂತವಿದೆ. ಭಾವೆನೆಗೂ ಬದುಕಿಗೂ ವ್ಯತ್ಯಾಸವಿದೆ. ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡ್ತಾರೆ. ಬದುಕಿನ ಮೇಲೆ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲ್ಲ. ಜನರ ಭಾವನೆಗಳ ಮೇಲೆ ರಾಜಕೀಯ ಮಾಡೋದು ಬಿಜೆಪಿ ಸಿದ್ದಾಂತ. ಜನರಿಗೆ ಒಳ್ಳೆದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತ ಎಂದು ಬಿಜೆಪಿ ವಿರುದ್ದ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ : – ಬೆಂಗಳೂರಿನಲ್ಲಿ ಸಚಿವ ವಿ ಸೋಮಣ್ಣ ಮನೆಗೆ ರೌಡಿಶೀಟರ್ ನಾಗ ಎಂಟ್ರಿ