ಮಾಜಿ ಪ್ರಧಾನಿ ದೇವೇಗೌಡ (Devegowda) ರು ಇಂದು ಮೈಸೂರು (Mysuru) ಜಿಲ್ಲೆ ನಂಜನಗೂಡಿ (Nanjangud) ನ ನಂಜುಂಡೇಶ್ವರನ ಸನ್ನಿಧಿಗೆ ತೆರಳಿ ಆಶೀರ್ವಾದ ಪಡೆದ್ರು. ಈ ವೇಳೆ ಕುಟುಂಬ ಸಮೇತರಾಗಿ ಬಂದು ರುದ್ರಾಭಿಷೇಕ ಮಾಡಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮೈಸೂರಿನ ಜನತಾದಳದಲ್ಲಿ ಒಡೆದ ಮನಸ್ಸುಗಳನ್ನ ಒಂದು ಮಾಡುವ ಪ್ರಯತ್ನ ಮಾಡಿದ್ರು.
ಈ ನಡುವೆ ಮಾತನಾಡಿದ ದೇವೇಗೌಡರು ಮುಂದಿನ ತಿಂಗಳಿನಿಂದ ನಾನು ಪ್ರಚಾರಕ್ಕೆ ಹೋಗುತ್ತೇನೆ. ಕುಮಾರಸ್ವಾಮಿ (Kumarswamy) ಸೇರಿ ಎಲ್ಲರೂ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಮನೆ ಮನೆಗೆ ತೆರಳಿ ಪಕ್ಷದ ಪರವಾಗಿ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ ತಿಳಿಸಿದ್ರು. ಜೆಡಿಎಸ್ (JDS) ಪಕ್ಷದ ಮೊದಲ ಪಟ್ಟಿ ಅಂತಿಮ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತೆ, ನಿತ್ಯ ಸರ್ವೆ ನಡೆಯುತ್ತಿದೆ. ಕುಮಾರಸ್ವಾಮಿ ಜೊತೆ ಶಿವಲಿಂಗೇಗೌಡ ಮಾತನಾಡಿದ್ದಾರೆ. ದ್ವಂದ್ವ ಇದೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಇದನ್ನೂ ಓದಿ : – ಜನರ ಭಾವನೆಗಳ ಮೇಲೆ ರಾಜಕೀಯ ಮಾಡೋದು ಬಿಜೆಪಿ ಸಿದ್ದಾಂತ – ಡಿ.ಕೆ.ಶಿವಕುಮಾರ್
ಪ್ರೀತಂ ಗೌಡಗೆ ಯಡಿಯೂರಪ್ಪ (Yediyurappa) ಸರ್ಕಾರ ಸರ್ವಶಕ್ತಿ ಕೊಟ್ಟಿದೆ. ಕಾಮಗಾರಿಗಳಿಗೆ ನೀಡಿದ ಅನುದಾನದಿಂದ ಹಣ ಸಂಪಾದಿಸಿದ್ದಾರೆ. ಪ್ರೀತಂ ಗೌಡ ಬೆದರಿಕೆಗೆ ನಾವು ಬಗ್ಗುವುದಿಲ್ಲ. ಹಾಸನ ನಗರದಲ್ಲಿ ಜೆಡಿಎಸ್ನಿಂದ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಹೆಚ್ಡಿಕೆ, ರೇವಣ್ಣ ಚರ್ಚಿಸಿ ಅಂತಿಮವಾಗಿ ನಿರ್ಣಯ ಮಾಡ್ತಾರೆ. ಯಾರು ಮುಖ್ಯಮಂತ್ರಿಯಾಗಬೇಕೆಂಬುದು ಜನ ತೀರ್ಮಾನಿಸ್ತಾರೆ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ರು.
ಇದನ್ನೂ ಓದಿ : – ನಾವು ಯಾವುದೇ ರೌಡಿಗಳನ್ನು ಪ್ರೋತ್ಸಾಹಿಸಲ್ಲ – ಸಿಎಂ ಬಸವರಾಜ್ ಬೊಮ್ಮಾಯಿ