ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ವಿಧಿವಶ – ಸಂತಾಪ ಸೂಚಿಸಿದ ಹೆಚ್ಡಿಕೆ

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಮನಗರ ( RAMANAGARA ) ಜಿಲ್ಲೆಯ ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ( NAGARAJU ) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

Janata Dal (Secular) - Wikipedia

ಸಿಂ.ಲಿಂ.ನಾಗರಾಜು ಮಾಜಿ ಪ್ರಧಾನಿ ದೇವೇಗೌಡರ ಒಡನಾಡಿಯಾಗಿದ್ದರು. ಕನ್ನಡ ಪರ ಹಾಗೂ ಜೆಡಿಎಸ್ ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದ ಸಿಂಲಿಂ.2011ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಸಿಪಿವೈ ವಿರುದ್ಧ ಸ್ಪರ್ಧಿಸಿದ್ದ ಸಾಮಾನ್ಯ ಕಾರ್ಯಕರ್ತ ಸಿಂಲಿಂ . ಇಂದು ಸಂಜೆ ಸಿಂಗರಾಜಿಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸಿಂ.ಲಿಂ.ನಾಗರಾಜು ಅಗಲಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( H.D KUMARASWAMY ) ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಚನ್ನಪಟ್ಟಣದ @JanataDal_S ಪಕ್ಷದ ಹಿರಿಯ ಮುಖಂಡರು, ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ ಶ್ರೀ ಸಿಂ.ಲಿಂ.ನಾಗರಾಜು ಅವರು ವಿಧಿವಶರಾಗಿರುವುದು ಬಹಳ ದುಃಖ ಉಂಟು ಮಾಡಿದೆ. ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡರ ಒಡನಾಡಿಯಾಗಿದ್ದ ನಾಗರಾಜು ಅವರು ಪಕ್ಷ ನಿಷ್ಠೆಯ ಪ್ರತೀಕವಾಗಿದ್ದರು. ಇದನ್ನೂ ಓದಿ : – ಚಿಕಿತ್ಸೆ ವಿಳಂಬದಿಂದ ಬಾಲಕ ಸಾವು – ಮೃತದೇಹವನ್ನು ಜೆಡಿಎಸ್ ಸಮಾವೇಶಕ್ಕೆ ಹೊತ್ತುತಂದ ಪೋಷಕರು

ಪಂಚರತ್ನ ರಥಯಾತ್ರೆಯಲ್ಲಿದ್ದ ನನಗೆ ವಿಷಯ ತಿಳಿಯಿತು. ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : – ಮೋದಿ ಆಧುನಿಕ ಭಸ್ಮಾಸುರ – ಕಾಂಗ್ರೆಸ್ ಮುಖಂಡ ಉಗ್ರಪ್ಪ ವ್ಯಂಗ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!