ಢಾಕಾದ ಶೇರೆ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್ (SIRAJ) ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ಚೆಂಡು ಅನಾಮುಲ್ ಹಕ್ ಅವರ ಬ್ಯಾಟ್ ಸವರಿ ಸ್ಲಿಪ್ನತ್ತ ಚಿಮ್ಮಿತ್ತು. ಅಲ್ಲೇ ಫೀಲ್ಡಿಂಗ್ನಲ್ಲಿದ್ದ ರೋಹಿತ್ ಶರ್ಮಾ ಕ್ಯಾಚ್ ಹಿಡಿಯುವ ಯತ್ನ ಮಾಡಿದ್ದರು.
https://t.co/SoOLqQYLn1#RohitSharma
— Shivam Rajvanshi (@social_timepass) December 7, 2022
ಆದರೆ ಚೆಂಡು ನೇರವಾಗಿ ಹಿಟ್ಮ್ಯಾನ್ ಅವರ ಹೆಬ್ಬೆರಳಿಗೆ ತಾಗಿ ಕೆಳಗೆ ಬಿದ್ದಿದೆ. ಇದರಿಂದ ಹೆಬ್ಬೆರಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ರೋಹಿತ್ ಶರ್ಮಾ ಮೈದಾನ ತೊರೆದರು. ಇದೀಗ ಗಾಯವನ್ನು ಪರಿಶೀಲಿಸಿರುವ ಫಿಸಿಯೋ ಸ್ಕ್ಯಾನಿಂಗ್ ಮಾಡಲು ಸೂಚಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ಗೆ ಇಳಿಯುವುದು ಅನುಮಾನ. ಟೀಮ್ ಇಂಡಿಯಾವನ್ನು ಉಪ ನಾಯಕ ಕೆಎಲ್ ರಾಹುಲ್ ಮುನ್ನಡೆಸಿದ್ದಾರೆ.
ಇದನ್ನು ಓದಿ : – ದೆಹಲಿ ತಂಡಕ್ಕೆ ವಿರೇಂದ್ರ ಸೆಹ್ವಾಗ್ ಪುತ್ರ ಎಂಟ್ರಿ…!