ಸಂಸದ ಡಿ.ಕೆ ಸುರೇಶ್ (Dk. suresh) ಒಬ್ಬ ಬೆಂಗಳೂರು (Bengaluru) ಗ್ರಾಮಾಂತರ ಲೊಕಸಭಾ ಸದಸ್ಯ . 75,000 ಮತಗಳು ಸೇರ್ಪಡೆ ಆಗಿದೆ ಅಂತಾರೆ. ಒಬ್ಬ ವ್ಯಕ್ತಿ ಮೇಲೆ ಕೆಸರೆರಚಿ ನಾವು ಪವಿತ್ರರು ಅಂತಾರೆ ಎಂದು ಡಿ.ಕೆ ಸುರೇಶ್ ಆರೋಪಕ್ಕೆ ಸಚಿವ ಮುನಿರತ್ನ (Muniratna) ಕಿಡಿಕಾರಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಏಕಕಾಲಕ್ಕೆ 17ಜನ ಪಕ್ಷ ಬಿಟ್ಟಿದ್ದು ನಿಮ್ಮ ವರ್ತನೆಯಿಂದ .ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ . ಸಣ್ಣತನದ ರಾಜಕೀಯ ಬಿಟ್ಟು ಮಾತಾಡಿ ಎಂದು ತಿರುಗೇಟು ನೀಡಿದ್ರು. ನಿಮಗೆ ಇಷ್ಟ ಬಂದ ಹಾಗೆ ಕೆಳಮಟ್ಟದಲ್ಲಿ ಮಾತಾಡಬೇಡಿ. ಮಲ್ಲೇಶ್ವರಂ (Malleshwaram) ನಲ್ಲಿ ನಂದು 5 ನೇ ತಲೆಮಾರು. ನಿಮಗೆ ಈ ಬಗ್ಗೆ ಗೊತ್ತಾಗಬೇಕು ಅಂದ್ರೆ ನನ್ನ ಬಗ್ಗೆ ನಿಮ್ಮ ಅಣ್ಣನನ್ನು ಕೇಳಿ ಎಂದು ಕಿಡಿಕಾರಿದ್ರು. ಚುನಾವಣೆಗೆ ನಾನು ನಾಮಪತ್ರ ಸಲ್ಲಿಸುತ್ತೇನೆ . ಯಾವುದೇ ಪ್ರಚಾರಕ್ಕೆ ನಾನು ಹೋಗಲ್ಲ ನೀವು ಹೊಗ್ಬೇಡಿ ಎಂದು ಡಿಕೆ ಸುರೇಶ್ ಗೆ ಬಹಿರಂಗವಾಗಿ ಸವಾಲು ಹಾಕಿಲ್ಲ. ಚುನಾವಣೆ ಹತ್ರ ಬರ್ತಾ ಇದೆ. ಅದಕ್ಕೆ ಇದೆಲ್ಲ ನಾಟಕ ಮಾಡ್ತಾ ಇದ್ದಾರೆ. ಡಿ.ಕೆ ಸುರೇಶ್ ಸಣ್ಣತನಬಿಟ್ಟು ದೊಡ್ಡತನ ಬೆಳೆಸಿಕೊಳ್ಳಬೇಕು ಎಂದು ಕಿಡಿಕಾರಿದ್ರು. ಇದನ್ನು ಓದಿ : – ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ – ಸಿಎಂ ಬೊಮ್ಮಾಯಿ ಗಂಭೀರ ಆರೋಪ..!
ಕಾಂಗ್ರೆಸ್ (Congress) ಪಕ್ಷದಿಂದ ಮತ್ತೆ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಬಿಟ್ಟು ಕೂಲಿ ಕೆಲಸ ಮಾಡ್ತೀನಿ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮತ್ತೆ ಸೇರೋ ಮಾತೆ ಇಲ್ಲ ಎಂದು ತಿಳಿಸಿದ್ರು.
ಇದನ್ನು ಓದಿ : – RR ನಗರದಲ್ಲಿ ಕಾಂಗ್ರೆಸ್ ಬೆಂಬಲಿತ ಮತ್ತು ಒಕ್ಕಲಿಗ ಮತದಾರ ಹೆಸರು ಡಿಲೀಟ್ – ಡಿ.ಕೆ ಸುರೇಶ್ ಗಂಭೀರ ಆರೋಪ