ದೇಶದಲ್ಲಿ ವಿವಿಧ ರಾಜ್ಯದಲ್ಲಿ ಆಗುವ ಚುನಾವಣೆಯಲ್ಲಿ ಪುನರ್ ಆಯ್ಕೆಯಾಗ್ತಿದೆ. ಮೋದಿ ಹಾಗೂ ನಮ್ಮ ಪಕ್ಷದ ಮೇಲೆ ಜನರು ವಿಶ್ವಾಸವಿಡುತ್ತಿದ್ದಾರೆ. ಜನಪರ ಕೆಲಸ ಆಗ್ತಿರೋದಕ್ಕೆ ಜನ ಮನಸೋತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಅಶ್ವಥ್ ನಾರಯಣ್ ( ASHWATH NARAYAN ) ಹೇಳಿದ್ದಾರೆ. ಗುಜರಾತ್ ನ ಜಯಭೇರಿ ದೊಡ್ಡ ಸಂದೇಶ. ಜನರ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ. ನಮ್ಮ ಪ್ರಧಾನಿಗೆ ಅಮಿತ್ ಶಾ ಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಹಿಮಾಚಲ ಪ್ರದೇಶದಲ್ಲಿ ಇನ್ನೂ ರಿಸಲ್ಟ್ ಬಂದಿಲ್ಲ. ಆರಂಭದಲ್ಲಿ ನಾವು ಮುಂದೆ ಇದ್ವಿ. ಆಮೇಲೆ ಅವರು ಮುಂದೆ ಬಂದ್ರು.
ದೆಹಲಿ ಮುನ್ಸಿಪಲ್ ಎಲೆಕ್ಷನ್ ಹಿನ್ನಡೆ ವಿಚಾರವಾಗಿ ಮಾತನಾಡಿದ ಅವರು,
ಬಹಳ ವರ್ಷದಿಂದ ನಮ್ಮ ಪಕ್ಷ ಅಲ್ಲಿ ಆಡಳಿತ ನಡೆಸಿದೆ. ಲೋಕಲ್ ಬಾಡಿ ಎಲೆಕ್ಷನ್ ನಲ್ಲಿ ಸ್ವಲ್ಪ ಚಾಲೆಂಜ್ ಬಂದಿರುತ್ತೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯ ತಿರ್ಪನ್ನ ತಗೆದುಕೊಳ್ಳಬೇಕು . ಹೊಸ ಪ್ರಯತ್ನದಲ್ಲಿ ಬೇರೆಯವರಿಗೂ ಅವಕಾಶ ಕೊಟ್ಟಿರ್ತಾರೆ. ನಮಗೆ ತೀರಾ ಹಿನ್ನಡೆಯಾಗಿಲ್ಲ. ಸಣ್ಣ ಹಿನ್ನಡೆಯಾಗಿದೆ ಅಷ್ಟೇ. ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬಿರಲಿದೆ.. ಕಾಂಗ್ರೆಸ್ ( CONGRESS ) ಎಲ್ಲಾ ಕಡೆ ವಾಶ್ ಔಟ್ ಆಗ್ತಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ವಿಫಲವಾಗಿರೋದು ಇದ್ರಿಂದ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು. ಇದನ್ನು ಓದಿ : – ಹಿಮಾಚಲ ಪ್ರದೇಶದಲ್ಲಿ ಮೋಡಿ ಮಾಡಿದ ಪ್ರಿಯಾಂಕಾ ಗಾಂಧಿ…!
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅಶ್ವಥ್ ನಾರಾಯಣ್
ಸಿದ್ದರಾಮಯ್ಯ ( SIDDARAMAIAH ) ರಾಜಕೀಯ ನಿವೃತ್ತಿ ತಗೆದುಕೊಳ್ಳಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದ್ರಲ್ಲಿ ಅನುಮಾನವೇ ಇಲ್ಲ. 75 ವಯಸ್ಸು ಆದ್ಮೇಲೆ ಏನ್ರಿ.. 75 ಆದ್ಮೇಲೆ natural process ನಲ್ಲಿ natural justice ನಲ್ಲಿ ರಿಟೈರ್ ಆಗಬೇಕು. ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿರುವ ನಾಯಕರು. ಅವರ ಘನ ಸಾಧನೆಗಳು ಇಡೀ ಜಗತ್ತಿಗೆ ಗೊತ್ತಿದೆ.. ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಪ್ರಸ್ತುತ ನಾಯಕರು..? ಅವರಿಗೆ 75 ವಯಸ್ಸಾಗಿದೆ . ಅವರು ರಾಜಕೀಯವನ್ನು ತೊರೆಯಬೇಕು. ಅದನ್ನು ಬಿಟ್ಟು ಇನ್ನು ನಾನೇ ಇದ್ದೀನಿ ನಾನೇ ಇದ್ದೀನಿ ಅಂದ್ರೆ ಎಷ್ಟು ಸ್ವಾರ್ಥಿ ಇದ್ದಾರೆ ಎಂದು ಅರ್ಥಮಾಡಿಕೊಳ್ಳಿ. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು ಅಂಥ ಯಾವ ಗುಣನೂ ಇಲ್ಲ…ನಾನು ನಾನು ನಾನು… ಎಂದು ಹೇಳುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ : – ಗುಜರಾತ್ ನಲ್ಲಿ ಆಪ್ ಗೆ ಬಿಜೆಪಿಯಿಂದಲೇ ಫಂಡಿಂಗ್- ಸಿದ್ದರಾಮಯ್ಯ