ಅಯೋಧ್ಯೆ (Ayodhye) ಯಲ್ಲಿ ಶ್ರೀರಾಮ ಮಂದಿರ (Ram mandir) ನಿರ್ಮಾಣ ಭರದಿಂದ ಸಾಗಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ವಿಶ್ವಸ್ತ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ (Pejavara vishwaprasanna) ಶ್ರೀಗಳು ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರಿನ ವೈಟ್ ಗಾರ್ಡನ್ ಬಡಾವಣೆಯಲ್ಲಿ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ (Hudi vijaykumar) ನಿರ್ಮಾಣ ಮಾಡಿರುವ ಮೋದಿ ನಿವಾಸಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಲಕ್ಷ್ಮೀ ಪೂಜೆಯಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದ್ದಾರೆ. ಇದನ್ನು ಓದಿ : – ರಾಷ್ಟ್ರೀಯ ಪಕ್ಷಗಳ ಬಗ್ಗೆ ನಾನು ಮಾತನಾಡುವುದಿಲ್ಲ – ನಿಖಿಲ್ ಕುಮಾರಸ್ವಾಮಿ
ನಂತರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭರದಿಂದ ಸಾಗಿದೆ. ಗರ್ಭಗುಡಿ 5-6 ಅಡಿಯಷ್ಟು ನಿರ್ಮಾಣವಾಗಿದೆ. ಗೋಡೆ, ಕಂಬ ನಿರ್ಮಾಣ ಕಾರ್ಯ ಸಾಗುತ್ತಿದೆ. 2024 ರ ಮಕರ ಸಂಕ್ರಾಂತಿ ನಂತರ ಶುಭದಿನ ಶ್ರೀರಾಮನ ಪ್ರಾಣ ಪ್ರತಿಷ್ಟೆ ನಡೆಯಲಿದೆ. ನಿರೀಕ್ಷೆಯಂತೆ 1 ವರ್ಷದಲ್ಲಿ ಎಲ್ಲರಿಗೂ ರಾಮನ ಕೃಪೆ ಸಿಗಲಿದೆ ಎಂದು ಹೇಳಿದ್ರು.
ಇದನ್ನು ಓದಿ : – ಪಕ್ಷ ಯಾವುದೇ ಸವಾಲು ನೀಡಿದರೂ ನಿಭಾಯಿಸುತ್ತೇನೆ – ಬಿ.ವೈ ವಿಜಯೇಂದ್ರ