ಸಂಸದೆ ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಊಹಾಪೋಹ ಮಂಡ್ಯದಲ್ಲಿ ಹರಿದಾಡುತ್ತಿದೆ. ಸಂಸದೆಯ ಆಪ್ತರೊಬ್ಬರು ಹಾಕಿರುವ ಫ್ಲೆಕ್ಸ್ ನಲ್ಲಿ ಬಿಜೆಪಿ ನಾಯಕರ ಜೊತೆ ಸಂಸದೆ ಸುಮಲತಾ (Sumalatha) ಅವರ ಭಾವಚಿತ್ರ ಇದೆ. ಈ ಮೂಲಕ ಸುಮಲತಾ ಬಿಜೆಪಿ (BJP) ಗೆ ಸೇರ್ಪಡೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
2019ರ ಲೋಕಸಭಾ ಚುನಾವಣೆ ವೇಳೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil kumarswamy ) ವಿರುದ್ಧ ಸ್ಪರ್ಧೆ ಮಾಡಿದ್ದರು. ಈ ವೇಳೆ ಸುಮಲತಾಗೆ ಜಿಲ್ಲೆಯ ಕಾಂಗ್ರೆಸ್ (Congress) ನಾಯಕರು, ಕಾರ್ಯಕರ್ತರು, ಬಿಜೆಪಿ ಹಾಗೂ ರೈತ ಸಂಘಗಳು ಬೆಂಬಲ ಸೂಚಿಸಿದ್ದವು. ಜೊತೆಗೆ ಜಿಲ್ಲೆಯ ಜನರು ‘ಸ್ವಾಭಿಮಾನಿ’ ಹೆಸರೇಳಿಕೊಂಡು ಸೆರೆಗೊಡ್ಡಿದ ಸುಮಲತೆಗೆ ಮತ ಹಾಕುವ ಮೂಲಕ ಅವರನ್ನು ಸಂಸದೆಯಾಗಿ ಆಯ್ಕೆ ಮಾಡಿದ್ದರು. ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು,ಇದೀಗ ಸುಮಲತಾ ಕೂಡ ಬಿಜೆಪಿ ಸೇರ್ತಾರೆ ಅನ್ನೊ ಮಾತುಗಳು ಹರಿದಾಡುತ್ತಿವೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮಂಡ್ಯ ನಗರದಲ್ಲಿ ಅಮಿತ್ ಶಾ (Amith shah) ಸ್ವಾಗತಕ್ಕೆ ಹಾಕಿರುವ ಫ್ಲೆಕ್ಸ್ ನಲ್ಲಿ ಸುಮಲತಾ ಫೋಟೋ ಕೂಡ ರಾರಾಜಿಸುತ್ತಿದೆ.
ಇದನ್ನು ಓದಿ : – ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ