State News

ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ: ಕುಮಾರಸ್ವಾಮಿ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಅವರ ಕಾಲದಲ್ಲಿ ನೀರು ಬಿಟ್ಟಿಲ್ವಾ ಅಂತ ಪ್ರಶ್ನೆ ಮಾಡ್ತಾ ಇದ್ದರಲ್ಲ. ನಾನು ಯಥೇಚ್ಛವಾಗಿ ಇದ್ದಾಗ ನೀರು ಹರಿಸಿದ್ದು, ಅವರ ಪಾಪದ ಕೆಲಸ, ಲೂಟಿ ಹೊಡೆಯುವ ಕೆಲಸಕ್ಕೆ ಪ್ರಕೃತಿ ಸಹಕಾರ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದೇವೇಗೌಡರು ನೀರು ಬಿಟ್ಟಿದ್ದು ಕೋರ್ಟ್ ಡೈರಕ್ಷನ್ ಕೊಟ್ಟಾಗ, ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ನೀರು ಬಿಟ್ಟಿಲ್ಲ ದೇವೇಗೌಡರು.
ಕಾವೇರಿ ವಿಚಾರದಲ್ಲಿ ರೈತರ ಹಿತಾಸಕ್ತಿ ನೋಡಿದ್ದರೆ ಅದು ದೇವೇಗೌಡರು. ಹೀಗಾಗಿ ಅವರ ಬಗ್ಗೆ ಮಾತಾಡೋಕೆ ಯಾರಿಗೂ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್ ಗೆ ಹೋಗಿ ತಕರಾರು ತೆಗೆದಾಗ ದೇವೇಗೌಡರು ಒಂದಿಷ್ಟು ಸಲಹೆ ಕೊಟ್ಟಿದ್ದರು.ಮೇಕೆದಾಟ ಪಾದಯಾತ್ರೆ ಮಾಡಿದ್ದು ಏನಾಯ್ಯು,ಚಿಕನ್ ಲೆಗ್ ತಿಂದು ಹೋರಾಟ ಮಾಡಿದ್ದು ಅಷ್ಟೆ. ನಿಮ್ಮ ಸ್ನೇಹಿತರೇ ಅಲ್ವೇ ಸ್ಟಾಲಿನ್ ಅವರು. ಕೊಟ್ಟು ತಗೊಳೋ ಸಂಬಂಧ ಮಾಡ್ತಾ ಇದ್ದೀರಲ್ಲಾ.ಸುಪ್ರೀಂಕೋರ್ಟ್ ಮುಂದೆ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ ಎಂದರು.

ಇನ್ನು ಪರ್ಸೆಂಟ್ ಸರ್ಕಾರ ಅನ್ನೋ ಆರೋಪ ತನಿಖೆಗೆ ಕೊಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, 2016-17 ರಲ್ಲಿ ಜಾಬ್ ಕಾರ್ಡ್ ದು ನಾಗಮೋಹನ್ ಅವರ ಬಳಿ ತನಿಖೆ ಮಾಡಿಸಿದ್ದರು
ಅದು ಎಲ್ಲಿದೆ, ಹಾಗಾದ್ರೆ ವರದಿ ಏನು..?ವೀರಪ್ಪ ನೇತೃತ್ವದಲ್ಲಿ ಅಂದರು, ಆದರೆ ಬಹುಷಃ ಒಪ್ಪಿಲ್ಲ ಅನ್ಸುತ್ತೆ. ಹಾಗಾಗಿ ಇವರಿಗೆ ವಹಿಸಿದ್ದಾರೆ ಅನ್ಸುತ್ತೆ.ನಾಗಮೋಹನ್ ದಾಸ್ ಅವರ ಕೈಲಿ ತನಿಖೆ ಮಾಡಿಸಿ, ಆ ವರದಿ ಹಾಗೆ ಇಟ್ಟುಕೊಳ್ತೀರ ಅಷ್ಟೆ ಎಂದರು.

ನೈಸ್ ವಿಚಾರವಾಗಿ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ನೈಸ್ ಕಂಪನಿಗೆ ಸಹಿ ಹಾಕಿದ್ದು ಯಾರು?ಅವನ ಜೊತೆ ಶಾಮೀಲಾಗಿ ಜಮೀನು ಹೊಡೀಲಿ ಅಂತ ದೇವೇಗೌಡರು ಸಹಿ ಹಾಕಿದ್ರಾ..?
ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದರು
ಸಹಿ ಯಾರು ಹಾಕಿದ್ದು ಗೊತ್ತಿದ್ಯಾ ಅವನಿಗೆ. ಅವತ್ತಿನ ಯುಡಿ ಮಿನಿಸ್ಟರ್ ಯಾವನು ಇದ್ದದ್ದು?
ಇವನ ಅಣ್ಣನೇ ಅಲ್ವಾ, ಅವನೇ ತಾನೆ ಸಹಿ ಹಾಕಿದ್ದು, ಯಾರ ಹೆಸರಿಗೆ ಮಾಡಲು ಹೊರಟಿದ್ದೀರಾ, ನಿಮ್ಮ ಕುಟುಂಬಕ್ಕೆ ಮಾಡಲು ಹೊರಟಿದ್ದೀರ. ನಮ್ಮ ಬಗ್ಗೆ ಮಾತಾಡ್ತೀರ ನೀವುಏಕ ವಚನದಲ್ಲೇ ಡಿ.ಕೆ ಶಿವಕುಮಾರ್‌ ಗೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!