ಬೆಂಗಳೂರು : ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ವರ್ಲ್ಡ್ ಕಪ್ ಮ್ಯಾಚ್ ನಡೆಯಲಿದೆ. ಇವತ್ತು ಪಾಕಿಸ್ತಾನ ಮತ್ತು ಅಸ್ಟ್ರೇಲಿಯಾ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ. ಬಲಿಷ್ಠ ಪಾಕಿಸ್ತಾನ ಹಾಗೂ ಅಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನೊಳಗೆ, ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಇದೆ.
ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಇಂದು ಕ್ರಿಕೆಟ್ ಹಬ್ಬ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಮೊದಲ ಪಂದ್ಯ ಬಲಿಷ್ಠ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಕೇಂದ್ರ ವಿಭಾಗ ಡಿಸಿಪಿ ಟಿ. ಹೆಚ್. ಶೇಖರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆ ಗಾಗಿ ಕ್ರೀಡಾಂಗಣದಲ್ಲಿ ಒಟ್ಟು 623 ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ 9 ACp, 25 ಇನ್ಸ್ ಪೆಕ್ಟರ್, 86 ಪಿಎಸ್ ಐ, 404 ಕಾನ್ ಸ್ಟೇಬಲ್ಗಳ ನಿಯೋಜಿಸಲಾಗಿದೆ.
ಪೊಲೀಸ್ ಕಮಿಷನರ್ ದಯಾನಂದ್ ಹೊಸ ಐಡಿಯಾ..
ವಿಶ್ವಕಪ್ ಪಂದ್ಯಕ್ಕಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೊಸ ಪ್ರಯೋಗ ಕಂಡುಕೊಂಡಿದ್ದಾರೆ. ಕ್ರಿಕೆಟ್ನೊಂದಿಗೆ ಸುರಕ್ಷತೆಯೂ ಮುಖ್ಯ ಎಂಬ ಸಂದೇಶ ಸಾರುವ ಹೋರ್ಡಿಂಗ್ಸ್ಗಳನ್ನು ನಗರದ ಹಲವೆಡೆ ಹಾಕಲಾಗಿದೆ. ಕ್ರಿಕೆಟ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಬೆಂಗಳೂರಿನಲ್ಲಿ ಪೊಲೀಸ್ ಮ್ಯಾನ್ ಫಾರ್ ದ ಮ್ಯಾಚ್ ಎಂಬ ಹೋರ್ಡಿಂಗ್ಸ್ಗಳನ್ನು ಕಲಾವಿದ ಸತೀಶ್ ಆಚಾರ್ಯ ರಚಿಸಿದ್ದಾರೆ. ಹೋರ್ಡಿಂಗ್ಸ್ ಹಾಕಿರುವ ಕಮಿಷನರ್ ದಯಾನಂದ್ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೊ, ಬಿಎಂಟಿಸಿ ಗಿಫ್ಟ್..
ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಬಿಎಂಟಿಸಿ(BMTC). ಇಂದು ಮತ್ತು ಪಂದ್ಯಗಳು ನಡೆಯುವ ಎಲ್ಲಾ ದಿನಗಳಲ್ಲೂ ಚಿನ್ನಸ್ವಾಮಿ ಸ್ಟೇಡಿಯಂ ಮಾರ್ಗವಾಗಿ ಹೆಚ್ಚುವರಿ ಬಸ್ಗಳ ಸಂಚಾರಕ್ಕೆ ಬಿಎಂಟಿಸಿ(BMTC) ನಿರ್ಧರಿಸಿದೆ. ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ. ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಯಲಹಂಕದ ಕಡೆ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ.
ಇನ್ನು ನಮ್ಮ ಮೆಟ್ರೊ ವಿಶೇಷ ವ್ಯವಸ್ಥೆ ಮಾಡಿದೆ. ಎಂಜಿ ರಸ್ತೆ ಅಥವಾ ಕಬ್ಬನ್ಪಾರ್ಕ್ ನಿಲ್ದಾಣಗಳಿಂದ ವಾಪಸ್ ಬರಲು ಅನುಕೂಲವಾಗಲು ರಿಟರ್ನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಸಂಜೆ 4 ಗಂಟೆ ಬಳಿಕ ಯಾವುದಾದರೂ ನಿಲ್ದಾಣಕ್ಕೆ ಒಮ್ಮೆ ಪ್ರಯಾಣ ಮಾಡಬಹುದು. ಬೆಳಗ್ಗೆ 7 ಗಂಟೆಯಿಂದಲೇ ಎಲ್ಲಾ ನಿಲ್ದಾಣಗಳಲ್ಲಿ 50 ರೂಪಾಯಿ ಕೊಟ್ಟು ಈ ಪೇಪರ್ ರಿಟರ್ನ್ ಟಿಕೆಟ್ ಪಡೆಯಬಹುದು.