Crime NewsState News

ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಾಪತ್ತೆ..!

ಪುತ್ತೂರು : ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹನುಮಂತ (22) ಎಂಬ ವ್ಯಕ್ತಿಯೇ ನಾಪತ್ತೆಯಾಗಿದ್ದು. ಇವರು ಬಾಗಲಕೋಟೆ ಮೂಲದ ಸುರೇಶ ಹಾಗೂ ರೇಣವ್ವ ದಂಪತಿಗಳ ಪುತ್ರ. ಈತ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಹನುಮಂತ ನಾಪತ್ತೆಯಾಗಿರುವ ಕುರಿತು ಆತನ ತಾಯಿ ರೇಣವ್ವ ದೂರು ನೀಡಿದ್ದು, ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧದ ಶಂಕೆಯೂ ಇಲ್ಲಿ ವ್ಯಕ್ತವಾಗಿದ್ದು, ಕೊಲೆ ಶಂಕೆ ಕೂಡಾ ವ್ಯಕ್ತವಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.

ಹನುಮಂತ ಮಾದ ರವರ ಮಗ ಶಿವಪ್ಪ ಮಾದರ ಎಂಬಾತನು ರೇಣವ್ವ ರವರ ತಮ್ಮನಾದ ಮಂಜುನಾಥರ ಬಳಿ, ‘ನಿನ್ನ ಅಕ್ಕನ ಮಗ ಹನುಮಂತ ನನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಅವನನ್ನು ಎಲ್ಲಿಗಾದರು ಕಳಿಸು’ ಎಂದು ಹೇಳಿದ್ದು ಅದರಂತೆ ಹನುಮಂತನನ್ನು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರಿನ ಕುಂಬ್ರದಲ್ಲಿರುವ ಗೆಳೆಯ ಸಂತೋಷ ಗದ್ದಿಗೌಡನ ಹತ್ತಿರ ಕಳಿಸಿದ್ದು, ಈ ಬಗ್ಗೆ ರೇಣವ್ವರಿಗೆ ತಮ್ಮ ಮಂಜುನಾಥ ಪೋನ್‌ ಕರೆ ಮೂಲಕ ತಿಳಿಸಿದ್ದು, ನ.14 ರಂದು ಮಧ್ಯಾಹ್ನ ಶಿವಪ್ಪನು ಮಂಜುನಾಥನಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿ ಅದೇ ದಿನ ಸಂಜೆ ರೇಣವ್ವ ಕುಂಬ್ರದ ಸಂತೋಷನಿಗೆ ಕರೆ ಮಾಡಿದಾಗ, ಶಿವಪ್ಪ, ಹನುಮಪ್ಪ ಮಾದರ, ಮಂಜುನಾಥ ಹನುಮಪ್ಪ ಮಾದರ ಮತ್ತು ದುರ್ಗಪ್ಪ ಮಾದರ ರವರು ವಾಹನದಲ್ಲಿ ಬಂದು ಕುಂಬ್ರದಲ್ಲಿರುವ ನನ್ನ ರೂಮ್‌ನಿಂದ ಹನುಮಂತ ನನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿರುವುದಾಗಿ ಸಂತೋಷ ತಿಳಿಸಿದ್ದು, ಕೂಡಲೇ ರೇಣವ್ವ ತಮ್ಮ ಮಂಜುನಾಥನು ವಿಷಯ ತಿಳಿಸಿದ್ದು, ಹನುಮಂತನಿಗೂ ಹಾಗೂ ಶಿವಪ್ಪ, ಮಂಜುನಾಥ, ದುರ್ಗಪ್ಪ ರವರಿಗೂ ಪೋನ್ ಕರೆ ಮಾಡಿದಾಗ ಅವರುಗಳ ಮೊಬೈಲ್ ಸ್ವಿಚ್‌ ಆಪ್ ಆಗಿದ್ದು, ನಂತರ ರೇಣವ್ವ ಮಗ ಮನೆಗೂ ಬಾರದೇ ಪೋನ್ ಕರೆಗೂ ಸಿಗದೇ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

ಹನುಮಂತ ನಾಪತ್ತೆಯಾಗಿರುವ ಕುರಿತು ಆತನ ತಾಯಿ ರೇಣವ್ವ ದೂರು ನೀಡಿದ್ದು, ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧದ ಶಂಕೆಯೂ ಇಲ್ಲಿ ವ್ಯಕ್ತವಾಗಿದ್ದು, ಕೊಲೆ ಶಂಕೆ ಕೂಡಾ ವ್ಯಕ್ತವಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!