ಬಿಕೆ ಹರಿಪ್ರಸಾದ್ ತನಿಖೆಗೆ ಸಿಸಿಬಿ ಅಧಿಕಾರಿಗಳು ಹೋಗಿದ್ದ ವಿಚಾರವಾಗಿದ್ದು, ನೀವು ಗಮನಿಸಬೇಕು, ಯಾರು ನಿರ್ದೇಶನ ಮಾಡುತ್ತಿದ್ದಾರೆ..? ಇದು ತನಿಖೆ ಆಗುತ್ತಿದ್ಯಿಯಾ, ಇಲ್ಲವಾ ಎಂದು ರಾಜ್ಯಪಾಲರು ಪದೇ ಪದೇ ಕೇಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯವರು ಕೇಳಿದ್ದಾರೆ. ಅಷ್ಟೇ ಸೀಮಿತವಾಗಿದ್ದು, ಗೃಹ ಇಲಾಖೆ ಕಳಿಸಿದ್ದು, ಸರ್ಕಾರವೇ ಕಳಿಸಿ ಮುಜುಗರ ಮಾಡಿಸಿದ್ದ ಅಂತದ್ದು ಯಾವುದು ಇಲ್ಲ. ಯಾಕೆ ರಾಜ್ಯಪಾಲರು ಇಷ್ಟು ಆಸಕ್ತಿ ಇದ್ದಾರೆ ಎಂದು ಗಮನಿಸಬೇಕು.
ಕೇಂದ್ರ ಸರ್ಕಾರದಿಂದ ನಿರ್ದೇಶನವಿದ್ಯಿಯಾ..? ಸರ್ಕಾರಕ್ಕೆ ಮುಜುಗರ, ಹರಿಪ್ರಸಾದ್ ಅವರಿಗೆ ಮುಜುಗರ ಮಾಡಬೇಕು ಎಂಬುದು ಇದ್ಯಿಯಾ, ನನಗೆ ಗೊತ್ತಿಲ್ಲ. ಒಂದು ಫ್ಯಾಟರ್ನ್ ಇದೆ, ಎಲ್ಲೆಲ್ಲಿ ಬಿಜೆಪಿ ಇಲ್ಲ ಅಲ್ಲಲ್ಲಿ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ.
ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಮಾಡ್ತೇವೆ. ಕಾನೂನು ಸುವ್ಯವಸ್ಥೆಗೂ, ರಾಜ್ಯಪಾಲರಿಗೆ ಏನು ಸಂಬಂಧ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಿಯಾ ಇಲ್ಲಿ..? ಹಿಂದಿನ ಸರ್ಕಾರ ಇದ್ದಾಗ ಯಾವತ್ತೂ ಈ ರೀತಿ ಆಗಿಲ್ಲ.. ಈ ಬಾರಿ ಯಾಕೆ ಈ ರೀತಿ ಆಗುತ್ತದೆ. ಜನ ಇದರ ಬಗ್ಗೆ ವಿಚಾರ ಮಾಡಬೇಕೆಂದು ಹೇಳಿದರು.