ಬೆಂಗಳೂರು : ಬಿಜೆಪಿಯವರ ದೌರ್ಬಲ್ಯ, ವೀಕ್ನೆಸ್ ಯತ್ನಾಳ್ ಬಳಿ ಇರಬಹುದು ಎಂದು ಸಚಿವ ಎಂ ಬಿ ಪಾಟೀಲ್ (Minister M B Patil) ಹೇಳಿದ್ದಾರೆ.
ಕಾಂಗ್ರೆಸ್ ಜೊತೆ ಯತ್ನಾಳ್ ಮ್ಯಾಚ್ ಫಿಕ್ಸಿಂಗ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ರೆ ಯಾಕೆ ಕ್ರಮ ಜರುಗಿಸಿಲ್ಲ. ಕಳೆದ ಐದು ವರ್ಷಗಳಿಂದ ಒಂದರ ಮೇಲೊಂದು ಬಾಂಬ್ ಒಗೆಯುತ್ತಿದ್ದಾರೆ. ಬಿಜೆಪಿ ನಾಯಕರ ದೌರ್ಬಲ್ಯ ಅದು. ಯತ್ನಾಳ್ ಹೇಳಿದ್ದು ಸತ್ಯ ಇರಬಹುದು, ಅದಕ್ಕೆ ಹೆದರುತ್ತಿದ್ದಾರೆ.
ಯತ್ನಾಳ್ ಕಾಂಗ್ರೆಸ್ ಏಜೆಂಟ್ ಅನ್ನೋ ಪ್ರಶ್ನೆ ಬಂದಿಲ್ಲ. ಬಿಜೆಪಿಯವರ ದೌರ್ಬಲ್ಯ, ವೀಕ್ನೆಸ್ ಯತ್ನಾಳ್ ಬಳಿ ಇರಬಹುದು. ನಂಗೆ ಗೊತ್ತಿಲ್ಲ, ಯಾಕೆ ಆ್ಯಕ್ಷನ್ ತೆಗೆದುಕೊಳ್ತಿಲ್ಲ ಅಂತಾ. ಕೋರ್ ಕಮಿಟಿ ನಡೀತಲ್ಲ, ಯಾಕೆ ಕ್ರಮ ತೆಗೆದುಕೊಂಡಿಲ್ಲ. ನಾವು ಬಿಜೆಪಿ ಅವಧಿಯಲ್ಲಿನ ಹಗರಣಗಳ ತನಿಖೆ ಮಾಡ್ತಿದ್ದೇವೆ. ಕೊರೋನಾದಲ್ಲಾಗಿರುವ ಅವ್ಯವಹಾರ, ಸತ್ಯಾಸತ್ಯತೆ ಬಯಲಿಗೆಳೆತೀವಿ ಎಂದು ಬಿಜೆಪಿ ನಾಯಕರಿಗೆ ತಿರಗೇಟು ನೀಡಿದರು.
ವರದಿ : ಬಸವರಾಜ ಹೂಗಾರ