ಬೆಂಗಳೂರು : 17 ಜನ ಬಿಜೆಪಿಗೆ ಬಂದವರು ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋಗುವುದಿಲ್ಲ. ಇದು ಸುಳ್ಳು ಉಹಾಪೂಹಾಗಳು, ಕೇಳಿ ಬರುತ್ತಿವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ (Former minister Kota Srinivas) ಸ್ಪಷ್ಟನೆ ನೀಡಿದ್ದಾರೆ
ಮಾದ್ಯಮದೊಂದಿಗೆ ಕಾಂಗ್ರೆಸ್ ನ 17 ಜನ ವಲಸಿಗರು ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆ ವಿಚಾರವಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಮಾತನಾಡಿ, 17 ಜನ ಬಿಜೆಪಿಗೆ ಬಂದವರು ಯಾರು ಕಾಂಗ್ರೆಸ್ ಗೆ ಮತ್ತೆ ಹೋಗುವುದಿಲ್ಲ. ಇದು ಸುಳ್ಳು ಉಹಾಪೂಹಾಗಳು, ಕೇಳಿ ಬರುತ್ತಿವೆ.ನಮ್ಮವರ್ಯಾರೂ ಪಾರ್ಟಿ ಬಿಡಲ್ಲ. ಸಮಸ್ಯೆ ಇರುವವರರು ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಮಸ್ಯೆ ಇರುವುದು ನಿಜ ಹಾಗಂದ ಮಾತ್ರಕ್ಕೆ ಪಕ್ಷ ಬಿಡುವ ಪ್ರಮೇಯ ಇಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.