ಬೆಂಗಳೂರು : ಕಾವೇರಿಗಾಗಿ ನಿಲ್ಲದ ರಾಜ್ಯದಲ್ಲಿ ಸರ್ಕಾರದ ವಿರುದ್ಧ ತೀವ್ರಗೊಂಡ ಹೋರಾಟ, ನಾಳೆ ಕನ್ನಡಪರ ಹೋರಾಟಗಾರ ಹಾಗೂ ವಾಟಾಳ್ ನಾಗರಾಜ್ರವರ ನೇತೃತ್ವದಲ್ಲಿ ಇಂದ ಕೆಆರ್ಎಸ್ (KRS) ಗೆ ಮುತ್ತಿಗೆ ಹಾಕಲು ತಿರ್ಮಾನ ಮಾಡಿದ್ದಾರೆ.
ಮೈಸೂರ್ ಬ್ಯಾಂಕ್ ಸರ್ಕಲ್ನಿಂದ ಕೆಆರ್ಎಸ್ (KRS) ವರೆಗೂ ಬಾರಿ ವಾಹನಗಳಲ್ಲಿ ಮೆರವಣಿಗೆ ಏರ್ಪಡಿಸಿದೆ. ಸುಮಾರು 5 ಸಾವಿರ ವಾಹನಗಳ ಮೂಲಕ ಮೆರವಣಿಗೆ ನಡೆಯಲ್ಲಿದು. ಮೆರವಣಿಗೆಯಲ್ಲಿ ರೈತ ಸಂಘಟನೆಗಳು ಕನ್ನಡಪರ ಸಂಘಟನೆಗಳು ನಾಳೆ ಬೆಳ್ಳಗ್ಗೆ 11ಗಂಟೆಗೆ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನೇತೃತ್ವದಲ್ಲಿ ಮೆರವಣಿಗೆ ಏರ್ಪಡಿಸಿದ್ದಾರೆ.
ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಲಾಗುವುದು. ಈ ಮೆರವಣಿಗೆ ಕನ್ನಡ ಒಕ್ಕೂಟದ ಮುಖಂಡರುಗಳಾದ ಕನ್ನಡ ಸೇನೆಯ, ಕರ್ನಾಟಕ ರಕ್ಷಣಾ ವೇದಿಕೆ,ಕನ್ನಡಪರ ಸಂಘಟನೆನಗಳ ಮುಂಖಡರು, ಹೋರಾಟಗಾರರು ಸೇರಿದಂತೆ ಇನ್ನೂ ಹಲವಾರು ಸಂಘ- ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರುಗಳು ಭಾಗವಹಿಸುತ್ತಾರೆ.