ಬೆಂಗಳೂರು : 32 ವರ್ಷಗಳ ಹಿಂದೆ ಶ್ರೀರಾಮಂದಿರಕ್ಕೆ ಹೋರಾಟಕ್ಕೆ ಹೋಗಿದ್ದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ.
ಮಾಧ್ಯಮದೊಂದಿಗೆ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಹುಬ್ಬಳ್ಳಿಯಲ್ಲಿ ರಾಮನ ಕರಸೇವೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕರಸೇವೆಯಲ್ಲಿ ನಾನು ಭಾಗಿಯಾಗಿದ್ದೆ ನನ್ನನ್ನು ಮುಟ್ಟಿ ನೋಡಿ. ಒಬ್ಬರನ್ನು ಬಂಧಿಸಿ ಇಷ್ಟು ದೊಡ್ಡ ಹೋರಾಟಕ್ಕೆ ಕಾರಣವಾಗಿದೆ. ರಾಮನ ಕಾರ್ಯ ಮಾಡಿದವರನ್ನು ಮುಟ್ಟಿದ್ದಿರಿ, ನಿಮ್ಮನ್ನು ಹಿಂದು ಸಮಾಜ ಎಂದೂ ಕ್ಷಮಿಸಲ್ಲ
ಶ್ರೀಕಾಂತ್ ಪೂಜಾರಿ ಮೇಲೆ ಹಲವು ಕೇಸ್ ವಿಚಾರವಾಗಿ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಗೆ ನಾಚಿಕೆ ಆಗಬೇಕು. ಯಾವಾಗ ಯಾವ ಸಂಗತಿ ಹೇಳಬೇಕು ಎಂದು ಪರಿಜ್ಞಾನ ಇಲ್ಲ. ನಿಮ್ಮ ಮಂತ್ರಿಮಂಡಲದಲ್ಲಿರುವವರ ಮೇಲೆ ಯಾವ ಕೇಸ್ ಇದೆ ಗೊತ್ತಾ? ಯಾವ್ಯಾವ ಅನಾಚಾರ ಮಾಡಿದ್ದಾರೆ ಎಂದು ಗೊತ್ತಿದೆ. ಹುಬ್ಬಳ್ಳಿಯ ಸ್ಟೇಷನ್ಗೆ ಬೆಂಕಿ ಹಾಕಿದವ್ರು ಮಾಡಿದ್ದು ಘನಂದಾರಿ ಕೆಲಸನಾ? ಗಲಭೆ ಮಾಡಿದ ಮುಸಲ್ಮಾನ ಗೂಂಡಾಗಳ ಕೇಸ್ ವಾಪಸ್ ತೆಗೆದುಕೊಂಡಿದ್ವಿ ನಿಮ್ಮ ಯೋಗ್ಯತೆ ಇಲ್ಲಿ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ..