ಬೆಂಗಳೂರು: ಇಂದು (ನವೆಂಬರ್ 5 ರಂದು) ನಮ್ಮ ಮೆಟ್ರೋ ಪ್ರಯಾಣಿಕೆಗೆ ಬ್ಯಾಡ್ ನ್ಯೂಸ್ ಇದಾಗಿದ್ದು ಇಂದು ಬೆಳಗ್ಗಿನಿಂದಲೂ ಎಂಜಿ ರೋಡ್ ನಿಂದ ಬೈಯ್ಯಪ್ಪನಹಳ್ಳಿ ವರೆಗೆ ಮೆಟ್ರೋ ಸೇವೆ ಭಾಗಶಃ ಸ್ಥಗಿತ ಆಗಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಬೆಳಗ್ಗೆ 7 ಗಂಟೆಗೆ ಬದಲಾಗಿ 9 ಗಂಟೆಗೆ ಪ್ರಾರಂಭವಾಗಲಿದೆ.ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಇಂದಿರಾನಗರದ ವರೆಗೆ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಎಂಜಿ ರೋಡ್ ನಿಂದ ಬೈಯ್ಯಪ್ಪನಹಳ್ಳಿ ವರೆಗೆ ಮೆಟ್ರೋ ಸೇವೆ ಲಭ್ಯ ಇರೋದಿಲ್ಲ. ಕಾಮಗಾರಿ ಪೂರ್ಣ ಬಳಿಕ ಮೆಟ್ರೋ ಸೇವೆ ಯಥಾಸ್ಥಿತಿ ಮರಳಿದೆ ಎಂದು ಬಿಎಂಆರ್ಸಿಲ್ ಮಾಹಿತಿ ನೀಡಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.