Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಗ್ರಾಹಕರಿಗೆ ಬಿಗ್‌ ಶಾಕ್..! ರಾಜ್ಯದ‌ಲ್ಲಿ ಬೇಳೆಕಾಳು ಬೆಲೆ ಬಲು ದುಬಾರಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಗಗನಕುಸುಮವಾಗುತ್ತಿದೆ ಈ ನಡುವೆ ಇದೀಗ ಬೇಳೆಕಾಳುಗಳ ಪೂರೈಕೆ ಕೊರತೆಯಿಂದಾಗಿ ರಾಜ್ಯದ ಜನರ ಜೇಬು ಸುಡುವಂತೆ ಭಾಸವಾಗುತ್ತದೆ. ಜನವರಿಯಲ್ಲಿ ಪ್ರತಿ ಕಿಲೋಗೆ 95 ರೂ. ನಿಂದ 99 ರೂ.ವರೆಗೆ ಮಾರಾಟವಾಗುತ್ತಿದ್ದ ಶಿವಲಿಂಗ ತೊಗರಿ ಬೇಳೆ ಆಗಸ್ಟ್ 20 ರಿಂದ ಸೆಪ್ಟೆಂಬರ್ 5 ರವರೆಗಿನ ಅವಧಿಯಲ್ಲಿ 3 ಬಾರಿ ಬೆಲೆ ಏರಿಕೆ ಕಂಡಿದ್ದು, ಈಗ ಬೆಂಗಳೂರು ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ 181 ರೂ.ಗೆ ಬಂದು ನಿಂತಿದೆ.

ಚಿಯಾದ ಸಾಂಬಾರು ಸಿದ್ಧತೆಗೆ ಅಗ್ರಪಂಕ್ತಿಯಲ್ಲಿರುವ ತೊಗರಿ ಬೇಳೆ ಹಾಗೂ ಇತರ ಬೇಳೆಕಾಳುಗಳನ್ನು ಪಿತೃಪಕ್ಷ, ನವರಾತ್ರಿ ಹಾಗೂ ದೀಪಾವಳಿಗೆ ಜನರು ಹೆಚ್ಚಾಗಿ ಖರೀದಿಸುವುದು ವಾಡಿಕೆ. ಆದರೆ, ಈ ಬಾರಿ ಬೇಳೆ ಖರೀದಿಗೆ ಹೋದ ಜನರಿಗೆ ಬೆಲೆ ಹೆಚ್ಚಳದ ಬಿಸಿ ಜೋರಾಗಿಯೇ ತಟ್ಟತೊಡಗಿದೆ.

ಕೋವಿಡ್ ಸಮಯದಲ್ಲಿ ಕಾರಣವಿಲ್ಲದೇ ವರ್ತಕರು ನಾನಾ ನೆಪಹೇಳಿ ಬೇಳೆ ಬೆಲೆಯನ್ನು 10 ರಿಂದ 20 ರೂ ಏರಿಸಿದ್ದರು. ಅದೇ ರೀತಿ ಈಗ ತೊಗರಿ ಬೇಳೆ ಜೊತೆಗೆ ಉದ್ದು, ಹೆಸರು, ಕಡಲೆ ಬೇಳೆಗಳ ಜೊತೆಗೆ ಹಲಸಂದೆ, ಬಟಾಣಿ, ಹುರುಳಿಕಾಳ ಬೆಲೆಯೂ ಶೇ. 20 ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವಾರದಿಂದ ಬೆಳೆಗಳ ಬೆಲೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ.

  • ಜನವರಿ 95-99 ರೂ.
  • ಜೂನ್ 100-115
  • ಆಗಸ್ಟ್ 145-165
  • ಸೆಪ್ಟೆಂಬರ್ 175-185

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!