ವಿಜಯಪುರ : ವಿಜಯಪುರ ಜಿಲ್ಲೆಯ ಸಿಂದಗಿ ಬಸ್ಸು ನಿಲ್ದಾಣ ಸಂಪೂರ್ಣ ಕಸಮಯವಾಗಿದ್ದು, ಸಾರ್ವಜನಿಕರು ಬಸ್ಸು ನಿಲ್ದಾಣಕ್ಕೆ ಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ.
ಸಾವಿರಾರು ಜನ ಹಾಗೂ ವಿದ್ಯಾರ್ಥಿಗಳು ಪ್ರತಿ ನಿತ್ಯ ಬಸ್ಸಿನಲ್ಲಿ ಸಂಚರಿಸಲು ಬಸ್ಸು ನಿಲ್ದಾಣಕ್ಕೆ ಆಗಮಿಸುತ್ತಾರೆ ಆದ್ರೆ ಎಲ್ಲಿ ನೋಡಿದರೂ ಕಸವೇ ಕಸ .ದುರ್ವಾಸನೆಯಿಂದ ಜನ ಪರದಾಡುವಂತಾಗಿದೆ.
ಬಸ್ಸು ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯು ಕೂಡ ಕಡಿಮೆ ಇದೆ .ತಕ್ಷಣವೇ ಅಧಿಕಾರಿಗಳು ಎಚ್ಚೆತುಕೊಂಡು ಸ್ವಚ್ಛತೆ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ