ಬೆಂಗಳೂರು :ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬರೋದಿಲ್ಲ ಅಂತ ಹೇಳಿತ್ತು. ಜನರ ಆಕ್ರೋಶದ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ ನಾನು ರಾಮಮಂದಿರ ಉದ್ಘಾಟನೆ ಬಳಿಕ ಹೋಗ್ತಿನಿ ಎನ್ನುವ ಮೂಲಕ ಯೂಟರ್ನ್ ವಿಚಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಬಹಳಷ್ಟು ಜನ ಅಡ್ವೈಸರ್ ಇದ್ದಾರೆ. ಎಂಟು ದಿನ ಒಬ್ಬರು ಮಾಡ್ತಾರೆ, ಆಮೇಲೆ ಒಬ್ಬರು ಮಾಡ್ತಾರೆ. ನಾವು ಹೋಗಲ್ಲ ಅಂದ್ರೆ ಲೋಕಸಭಾ ಚುನಾವಣೆ ಹೊಡೆತ ಬೀಳುತ್ತೆ ಅಂತ ಹೇಳಿರ್ತಾರೆ. ಆಮೇಲೆ ಉದ್ಘಾಟನೆ ಆದಮೇಲೆ ಹೋಗ್ತೀನಿ ಅಂದಿದ್ದಾರೆ. ಎರಡು ವಿಚಾರ ಆದ್ರೆ ದ್ವಂದ್ವ ನಿಲುವಾಗಲಿದೆ. ಹಲವು ವಿಚಾರ ಇದ್ದಾಗ ಏನು ಹೇಳೋದು. ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದಾರೆ