ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಓಡಾಡುವ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ಇದಾಗಿದ್ದು, ಸೆಪ್ಟೆಂಬರ್ 15ರ ನಂತರ ಬೈಯಪ್ಪನಹಳ್ಳಿ-ಕೆ.ಆರ್. ಪುರ ಹಾಗೂ ಕೆಂಗೇರಿ-ಚಲ್ಲಘಟ್ಟದ ವಿಸ್ತರಿತ ನಿಲ್ದಾಣಗಳ ಎರಡು ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ನಿಲ್ದಾಣಗಳ ನಡುವೆ ಕೊನೇ ಹಂತ ತಲುಪಿದೆ. ಬೆಂಗಳೂರು ನಗರದ ಬಹುತೇಕ ಭಾಗಗಳಿಗೆ ನೇರಳೆ ಮಾರ್ಗ ಸಂಪರ್ಕಿಸುತ್ತದೆ. ಇದು ಸಿಟಿಯಲ್ಲಿ ಓಡಾಡುವ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದೆನ್ನಲಾಗಿದೆ. ಬೈಯಪ್ಪನಹಳ್ಳಿ-ಕೆ.ಆರ್. ಪುರ ಹಾಗೂ ಕೆಂಗೇರಿ-ಚಲ್ಲಘಟ್ಟದ ವಿಸ್ತರಿತ ನಿಲ್ದಾಣಗಳಲ್ಲಿ ಮುಂದಿನ ಸೆಪ್ಟೆಂಬರ್ 15ರ ನಂತರ ಸಂಚಾರ ಆರಂಭವಾಗಲಿದೆ ಎಂದು ವರದಿಯಾಗಿದೆ.