ಬೆಂಗಳೂರು : ಕರ್ನಾಟಕದ ಹಲವೆಡೆ ಇಂದಿನಿಂದ ಸೆಪ್ಟೆಂಬರ್16ರವರೆಗೆ ಮಳೆ ಹವಾಮಾನ ಇಲಾಖೆ (Meteorological Department)ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಮುಂದಿನ 6 ದಿನ ಅತಿ ಹೆಚ್ಚು ಮಳೆಬೀಳಲಿದೆ ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಪಣಂಬೂರು, ಕಾರ್ಕಳ, ಕಾರವಾರ, ಖಜೂರಿ, ಲಿಂಗನಮಕ್ಕಿ, ಶೃಂಗೇರಿ, ಮಂಚಿಕೆರೆ, ಗೋಕರ್ಣ, ಕುಮಟಾ, ಜೋಯಿಡಾ, ಹೊನ್ನಾವರ, ಮಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ, ಲೋಂಡಾ, ಕಮಲಾಪುರ, ಕೋಟ, ಶಿರಾಲಿ, ಕ್ಯಾಸಲ್ರಾಕ್, ಸುಳ್ಯ, ಭಾಗಮಂಡಲ, ಪೊನ್ನಂಪೇಟೆ, ಸಿದ್ದಾಪುರ, ಕೊಲ್ಲೂರು, ಪುತ್ತೂರು, ಕಮ್ಮರಡಿ, ನಾಪೋಕ್ಲು, ಅಂಕೋಲಾ, ಗೇರುಸೊಪ್ಪ, ಕದ್ರಾ, ಮಾಣಿ, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ ಎನ್ಆರ್ ಪುರ, ಕೊಪ್ಪ. ಸಕಲೇಶಪುರ, ಜಯಪುರ, ಕೊಟ್ಟಿಗೆಹಾರ, ಮಡಿಕೇರಿ, ಸೋಮವಾರಪೇಟೆ, ತಾಳಗುಪ್ಪದಲ್ಲಿ ಮಳೆಯಾಗಿದೆ.