Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಹಿಜಾಬ್‌ ಕುರಿತ ಸಿಎಂ ತೀರ್ಮಾನ ವಾಪಸ್ ಪಡೆಯಲಿ ಇದೊಂದು ಭಂಡ ಸರ್ಕಾರ : ಬಿಎಸ್‌ವೈ ಕಿಡಿ

ಬೆಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನೀಡಿದ ಹೇಳಿಕೆ ವಿರುದ್ಧ ಬಿ.ಎಸ್‌. ಯಡಿಯೂರಪ್ಪ ಕಿಡಿಕಾರಿದ್ದಾರೆ.

ʼಮಾಧ್ಯಮದೊಂದಿಗೆ ಮಾತನಾಡಿ,  ಸಿದ್ದರಾಮಯ್ಯ ಅವರ ತೀರ್ಮಾನವನ್ನು ಖಂಡಿಸುತ್ತೇನೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ‌ ಅಗತ್ಯ ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದೆ ಈಗಲೇ ಎಚ್ಚೆತ್ತು ಈ ‌ತೀರ್ಮಾನ ವಾಪಸ್ ಪಡೆಯಲಿ ಇದೊಂದು ಭಂಡ ಸರ್ಕಾರ ಎಂದು ಕಿಡಿಕಾರಿದ್ದಾರೆ.

 ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ  ಬಾಳಬೇಕು ಎನ್ನುವ ಪಕ್ಷ ಬಿಜೆಪಿ ಇಂದು ಸಿಎಂ ಹಿಜಾಬ್ ರದ್ದು ಮಾಡುವ ತೀರ್ಮಾನ ತೆಗೆದುಕೊಳ್ಳಲು ಹೊರಟಿರುವುದನ್ನು ಖಂಡಿಸುತ್ತೇನೆ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಹಿಜಾಬ್ ರದ್ದು ಮಾಡಿ ಅಂತಾ ಯಾವ ಮುಸ್ಲಿಂ ಮುಖಂಡರು ಸಿದ್ದರಾಮಯ್ಯನವರನ್ನು ಕೇಳಿದ್ದರು?

ಇವೆಲ್ಲಾ ರಾಜಕೀಯ ದೊಂಬರಾಟವನ್ನು ಸಿಎಂ ಬಿಡಬೇಕು ಈ ರೀತಿ ಮಾಡುವುದರಿಂದ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಲೋಕಸಭಾ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎನ್ನುವುದನ್ನೂ ಮರೆತು ಈ ರೀತಿ ಮಾತಾಡುತ್ತಿದ್ದೀರಿ ಈಗಲಾದರೂ ತೀರ್ಮಾನ ವಾಪಸ್ ಪಡೆಯಬೇಕು ಸಿಎಂ ಜಾಗೃತರಾಗಿ ಮೊದಲಿದ್ದ ರೀತಿಯಲ್ಲಿ ಮುಂದುವರೆಯಲು ಅವಕಾಶ ಕೊಡಬೇಕು ಬಿಜೆಪಿ ಇದಕ್ಕೆ ಹೋರಾಟ ಮಾಡುವ ಅಗತ್ಯ ಇಲ್ಲ ಇದು ಭಂಡ ಸರ್ಕಾರ ಅವರ ಉಚಿತ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗದೇ ಜನರನ್ನ ದಿಕ್ಕು ತಪ್ಪಿಸಲು ಈ ರೀತಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಇದನ್ನು ಯಾರೂ ಕೂಡಾ ಒಪ್ಪುವುದಿಲ್ಲ ರಾಜ್ಯದ ಜನರ ಒತ್ತಾಯ ಮನಗಂಡು ಸಿದ್ದರಾಮಯ್ಯ ತೀರ್ಮಾನ ವಾಪಸ್ ಪಡೆಯಬೇಕು ಎಂದರು,

.ಹಾಗೆ ಐಷಾರಾಮಿ ವಿಮಾನದಲ್ಲಿ ಸಿಎಂ ಮತ್ತು ಸಚಿವರು ಪ್ರಯಾಣ ವಿಚಾರ ಬಗ್ಗೆಯೂ ಮಾತನಾಡಿ  ನಾನು ಅದರ ಬಗ್ಗೆ ಯಾವುದೇ ಟೀಕೆ ಮಾಡಲು ಹೋಗಲ್ಲ ಬರಗಾಲವನ್ನು ಇವರು ಮರೆತೇ ಬಿಟ್ಟಿದ್ದಾರೆ ಯಾವುದೇ ಮಂತ್ರಿ ಬರ ಪ್ರವಾಸ ಮಾಡಿಲ್ಲ, ಪರಿಹಾರ ಕೊಟ್ಟಿಲ್ಲ ಸಿಎಂ ನಡವಳಿಕೆಗೆ ಜನ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!