ಗದಗ : ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕಾಣೆಯಾಗಿದ್ದಾರೆಂದು ಜನಜಾಗೃತಿ ಜಾಥಾ ಮೂಲಕ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿವಿಧ ಸಂಘಟನೆಗಳು ಹಾಗೂ ಪಕ್ಷಾತೀತ ರೈತ ಪರ ಹೋರಾಟ ವೇದಿಕೆ ಶಿರಹಟ್ಟಿ ಲಕ್ಷ್ಮೇಶ್ವರ ವತಿಯಿಂದ ಶಾಸಕರ ವಿರುದ್ದ ರೈತ ಪರ ಹೋರಾಟಗಾರದಿಂದ ಕಪ್ಪು ಬಟ್ಟೆ ಪ್ರದರ್ಶನ ನಡೆಸಲಾಯಿತು.
ನೆನ್ನೆ ಕೇಂದ್ರ ಬರ ಅಧ್ಯಯನ ತಂಡ ಬಂದಾಗ ಅವರಿಗೆ ರೈತರ ಸಮಸ್ಯೆ ಬಗ್ಗೆ ಮನವರಿಕೆ ಮಾಡದೇ ಕಾಣೆಯಾಗಿದ್ದಾರೆ. ಬರದ ನಡುವೆ ರೈತರ ಸಮಸ್ಯೆ ಆಲಿಸದ ಶಾಸಕ ಅಂತಾ ಪಟ್ಟಣದ ಹಾವಳಿ ಅಂಜನೇಯ ದೇವಸ್ಥಾನದಿಂದ ಬಸ್ ಸ್ಟಾಂಡ್ವರೆಗೂ ಶಾಸಕರ ವಿರುದ್ದ ದಿಕ್ಕಾರ ಕೂಗುತ್ತ ಹಲಗೆ ಬಾರಿಸುವ ಮುಖಾಂತರ ಪ್ರತಿಭಟನೆ ನಡೆಸಿದರು.