Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಲು ಹೊಸ ಗೈಡ್‌ಲೈನ್ಸ್‌..!

ಬೆಂಗಳೂರು : ಅತ್ತಿಬೆಲೆ ಪಟಾಕಿ ದುರಂತ ಬೆನ್ನಲ್ಲೆ ರಾಜ್ಯದಲ್ಲಿ ಪಟಾಕಿ ನಿಷೇಧ ಮಾಡುವಂತೆ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

2013 ಹಾಗೂ 2018 ರಲ್ಲೂಎರಡು ಭಾರಿ ಕೆಮಿಕಲ್ ಮಿಶ್ರಿತ ಪಟಾಕಿ ಸುಪ್ರೀಂ ಕೋರ್ಟ್ ಬ್ಯಾನ್ ಮಾಡಿತ್ತು. ಆದ್ರೂ ಸಹ ರಾಜ್ಯದಲ್ಲಿ ಪಟಾಕಿ ಮಾರಾಟವಾಗುತ್ತಿದ್ದರು ರಾಜ್ಯ ಸರ್ಕಾರ ಸಹ ಬ್ಯಾನ್ ಮಾಡಿರಲಿಲ್ಲ. ಆದ್ರೆ ಕಳೆದ ವಾರ ಆಗಿರುವ ಅತ್ತಿಬೆಲೆ ದುರಂತ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದಲ್ಲದೇ, ಹೈಕೋರ್ಟ್ ಸಹ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ ನಂತರ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ ಗೈಡ್ ಲೈನ್ಸ್ ಬಿಡುಗಡೆಗೊಳಿಸುತ್ತದೆ.

ರಾಜ್ಯಾದ್ಯಂತ ನವೆಂಬರ್ 11 ರಿಂದ 15 ರವರಿಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಬ್ಬಕ್ಕೆ ಪಟಾಕಿ ಬಳಸಲು ವಿಶೇಷ ಗೈಡ್ ಲೈನ್ ಬಿಡುಗಡೆ ಮಾಡಿದೆ.ದೀಪಾವಳಿ ಹಬ್ಬದ ಸಮಯದಲ್ಲಿ ಕೇವಲ ಎರಡು ಗಂಟೇ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಿದ್ದು, ಹಬ್ಬದ ದಿನದಂದು ಮಾತ್ರ ರಾತ್ರಿ 8 ರಿಂದ ರಾತ್ರಿ 10 ವರೆಗೆ ಮಾತ್ರ ಪಟಾಕಿ ಬಳಸಲು ಅವಕಾಶ ಕೊಡಲಾಗಿದೆ.

ಇದ್ರಲ್ಲೂ ಸಹ ಕೆಲವೊಂದಿಷ್ಟು ಕಂಡೀಶನ್ ಸಹ ಹಾಕಲಾಗಿದೆ. ಹೌದು ದೀಪಾವಳಿ ಸಮಯದಲ್ಲಿ ಯಾವುದೇ ರೀತಿಯ ಕೆಮಿಕಲ್ ಮಿಶ್ರಿತ ಪಟಾಕಿ ಬಳಸುವಂತಿಲ್ಲ, ಕೇವಲ ಹಸಿರು ಪಟಾಕಿ ಮಾತ್ರ ಬಳಸಬೇಕು . ಒಂದು ವೇಳೆ ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಹೊಡೆದಲ್ಲಿ ಪ್ರತಿ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣಾ ಪ್ರಾಧಿಕಾರ ಹದ್ದಿನ ಕಣ್ಣು ಇಟ್ಟಿದೆ. ಹಾಗೆಯೇ ಹೊರ ರಾಜ್ಯದಿಂದ ಪಟಾಕಿ ತಂದು ಮಾರಾಟ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಅಲ್ಲದೇ, ಇದರ ಸಂಬಂಧ ಅನಾಹುತ ಆದ್ರೆ ಆಯಾ ಠಾಣಾ ಪೊಲೀಸ್ ಅವರೇ ಹೊಣೆ ಹೊರಬೇಕಾಗಿದೆ. ಯಾವುದೇ ರೀತಿಯಲ್ಲಿ ಕೆಮಿಕಲ್ ಮಿಶ್ರಿತ ಪಟಾಕಿ ಮಾರಾಟ ಹಾಗೂ ಬಳಸಲು ನಿಷೇಧ ಹೇರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!