ತುಮಕೂರು : ಬೆಂಗಳೂರಿನ 15 ಶಾಲೆಗಳಿಗೆ ಉಗ್ರ ಸಂಘಟನೆಯಿಂದ ಬಾಂಬ್ ಬೆದರಿಕೆಯ ಮೇಲ್ ವಿಚಾರ ತುಮಕೂರಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Home Minister Dr G Parameshwara) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ನಿಮ್ಮ ಮಕ್ಕಳನ್ನ ಕೊಲ್ಲುತ್ತೇವೆ ಎಂದು ಮೇಲ್ ಕಳಿಸಿದ್ದಾರೆ. ನಾವು ಎಲ್ಲಿಂದ ಮೇಲ್ ಬಂದಿದೆ ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಒಂದು ವೇಳೆ ಬಾಂಬ್ ಇದ್ರೆ ಅಂತಾ ವೆರಿಫೈ ಮಾಡ್ತಿದ್ದೇವೆ. ಇಂಡಿಯನ್ ಮುಜಾಹಿದ್ದೀನಾ..? ಯಾವುದು ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಕಳೆದ ವರ್ಷ ಕೂಡ ಈ ರೀತಿಯ ಕರೆ ಬಂದಿತ್ತು. ಇದಕ್ಕೆ ಏನು ಕ್ರಮ ಮಾಡಬೇಕೆಂದು ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ನಾನು ರೆಗ್ಯುಲರ್ ಟಚ್ನಲ್ಲಿದೇನೆ. ಮಧ್ಯಾಹ್ನದ ನಂತರ ಅಧಿಕಾರಿಗಳ ಸಭೆ ಮಾಡ್ತೀನಿ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮೊದಲು ಆ 15 ಶಾಲೆಗಳಿಗೆ ಮಕ್ಕಳು ಬರದಂತೆ ಕ್ರಮ ವಹಿಸಿದ್ದೇವೆ ಎಂದಿದ್ದಾರೆ.