Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political News

ಕೇಂದ್ರದಲ್ಲಿ ರೂಲಿಂಗ್ ಪಾರ್ಟಿಯಿಂದ ದಾಳಿ ನಡೆಯುತ್ತಿದೆ : ಮಾಜಿ ಸಂಸದ ವಿ.ಎಸ್ ಉಗ್ರಪ್ಪ

ಬೆಂಗಳೂರು : ಕೇಂದ್ರದಲ್ಲಿ ರೂಲಿಂಗ್ ಪಾರ್ಟಿಯಿಂದ ದಾಳಿ ನಡೆಯುತ್ತಿದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ (Former MP V .S Ugrappa) ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ.ರೂಲಿಂಗ್ ಪಾರ್ಟಿಯಿಂದ ದಾಳಿ ನಡೆಯುತ್ತಿದೆ. 92 ಜನ ಸಂಸದರನ್ನ ಸಸ್ಪೆಂಡ್ ಮಾಡಲಾಗಿದೆ. ಮೂರು ಮಂದಿ ಮೇಲೆ ಶಿಸ್ತುಸಮಿತಿಗೆ ಕೊಟ್ಟಿದ್ದಾರೆ. ಸರ್ಕಾರದ ವಿಫಲತೆಯನ್ನ ಪ್ರಶ್ನಿಸಿದ್ದಾರೆ.
ಪ್ರಶ್ನಿಸಿದ್ದಕ್ಕೆ ಈ ರೀತಿ ಸಸ್ಪೆಂಡ್ ಮಾಡಿದ್ದಾರೆ. ಸಂಸತ್ ಮೇಲಿನ ದಾಳಿಯ ಬಗ್ಗೆ ಪ್ರಸ್ತಾಪ. ಸದಸ್ಯರು ಪ್ರಸ್ತಾಪ ಮಾಡಿದ್ದಕ್ಕೆ ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು.

ಪಾಸ್ ಕೊಡಬೇಕಾದರೆ ನಿಯಮ ಗಳಿವೆ ಸಂಬಂಧಿಕರಿರಬೇಕು,ಗೊತ್ತಿರುವವರು ಇರಬೇಕು. ಹೀಗಿದ್ದಾಗ ಮಾತ್ರ ಪಾಸ್ ಕೊಡಬಹುದು. ದೇಶದ ರಕ್ಷಣೆಯ ದೃಷ್ಟಿಯಿಂದ ಘಟನೆ ಪ್ರಸ್ತಾಪಿಸಲಾಗಿದೆ. ಆದರೆ ಶಿಸ್ತು ಎಂದು ಸ್ಪೀಕರ್ ಈ ಕ್ರಮ ಜರುಗಿಸಿದ್ದಾರೆ. ಶಿಸ್ತುಕ್ರಮಕ್ಕೂ ಕೆಲ ನಿಯಮಗಳಿವೆ. ಅದನ್ನ ನೋಡಿ ಕ್ರಮ ಜರುಗಿಸಬೇಕು. ಆದರೆ ಇಲ್ಲಿ ಏಕಾಏಕಿ ಸಸ್ಪೆಂಡ್ ಮಾಡಲಾಗಿದೆ. ಇದು ಸರಿಯಾದ ನಡೆಯಲ್ಲ. ಸದನದ ಹೊರಗೆ ಪ್ರಧಾನಿ ಹೇಳಿಕೆ ಕೊಡ್ತಾರೆ. ಸಂಸತ್ ಮೇಲಿನ ದಾಳಿ ಬಗ್ಗೆ ಹೇಳ್ತಾರೆ. ಸಂಸತ್ ಒಳಗೆ ಹೇಳೋಕೆ ಹಿಂದೇಟೇಕೆ. ಮೈಸೂರು ಸಂಸದರು ಪಾಸ್ ವಿತರಿಸಿದ್ದು ಹೇಗೆ..? ಪಾಸ್ ಕೊಡಬೇಕಾದರೆ ನಿಯಮ ಪಾಲಿಸಿಲ್ಲ. ಇವತ್ತು ಸಂಸದರು ತಲೆಮರೆಸಿಕೊಂಡಿದ್ದಾರೆ. ತಲೆ ಮರೆಸಿಕೊಳ್ಳೋಕೆ‌ಗಿಲ್ಟ್ ಕಾಡುತ್ತಿರಬಹುದು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವರದಿ : ಬಸವರಾಜ ಹೂಗಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!