ಬಾಗಲಕೋಟೆ : ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಬೆನ್ನಲ್ಲೇ, ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಾಗಲಕೋಟೆಗೆ ಭೇಟಿ ನೀಡಿದ್ದು, ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಂಡಿದೆ. ನಗರದಲ್ಲಿಂದು ಕೇಸರಿ ಪಡೆ ರಣಕಹಳೆ ಮೊಳಗಿಸಿದೆ.
ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದಾರಿಯುದ್ದಕ್ಕೂ ಪುಷ್ಪಾರ್ಚನೆ, ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ,ಮೆರವಣಿಗೆಗೆ ಸಾಥ್ ನೀಡಿದ ಬೈಕ್ ರ್ಯಾಲಿ. ಹೌದು ಈ ಎಲ್ಲಾ ದೃಶ್ಯಾವಳಿಗಳಿಗೆ ಸಾಕ್ಷಿ ಯಾಗಿದ್ದು ಬಾಗಲಕೋಟೆ ನಗರ.ಹೌದು ವಿಜೆಪಿಯ ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಬಾಗಲಕೋಟೆ ನಗರಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬೆಳಿಗ್ಗೆ 9 ಗಂಟೆಗೆ ಬಾಗಲಕೋಟೆ ನಗರಕ್ಕೆ ಆಗಮಿಸಿದ ವಿಜೇಂದ್ರ ಮಾಜಿ ಶಾಸಕ ಡಾ.ವೀರಣ್ಣ ಚರಮತಿಮಠ ಅವರ ಮನೆಗೆ ಭೇಟಿ ನೀಡಿ ಬೆಳಗಿನ ಉಪಹಾರವನ್ನ ಸವಿದ್ರು. ನಂತರ ನವನಗರದ ವಾರ್ಡ್ ನಂ.25’ರ ಬೂತ್ ನಂ.164’ರ ಅಧ್ಯಕ್ಷ ಪ್ರಕಾಶ ಹಿರೆಹೊನ್ನಳ್ಳಿ ಅವರ ಮನೆಗೆ ಭೇಟಿ ನೀಡಿ,ಗೋಪೂಜೆ ನೆರವೇರಿಸಿ ಬಿಜೆಒಇ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ರು.ನವನಗರದ ಬಿಜೆಪಿಯ ನೂತನ ಕಾರ್ಯಾಲಯಕ್ಕೆ ಭೇಟಿ ಪ್ರಧಾನ ಮಂತ್ರಿ ಮೋದಿ ಅವರವ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಿದ್ರು.ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯ ಕಾಂಗ್ರೆಸ್’ಗೆ ಗ್ಯಾರಂಟಿಗಳು ನುಂಗಲಾರದ ತುತ್ತಾಗಿದ್ದು,ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆಂದು ಸಿಎಂ ಸಿದ್ಧರಾಮಯ್ಯನವರ ವಿರುದ್ಧ ಹರಿಹಾಯ್ದರು.
ಮಧ್ಯಾಹ್ನ 12 ಗಂಟೆಗೆ ನವನಗರದ ಬಿಜೆಪಿ ಕಾರ್ಯಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿಜಯೇಂದ್ರ ಅವರನ್ನ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕಸಾಥ್ ನೀಡಿದ್ರು.ಅಭಿಮಾನಿಗಳು,ಕಾರ್ಯಕರ್ತರು ಜೆಸಿಬಿ ಮೂಲಕಪುಷ್ಪಾರ್ಚನೆ ಮಾಡಿ ಸಂಭ್ರಕಿಸಿದ್ರು.ಮೆರವಣಿಗೆ ನವಬಗರದ ಜಲಾಭವನ ತಲುಪಿದ ಬಳಿಕ ಸಭೆಯಾಗಿ ಮಾರ್ಪಟ್ಟಿತು.ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ,ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ವರೆಗೆ ವಿಶ್ರಾಂತಿ ಪಡೆಯುವುದಿಲ್ಲವೆಂಸು ಶಪತ ಮಾಡಿದ್ದೇನೆಂದ್ರು.ನಾಳೆ ವಿಧಾನ ಸಭೆ ಚುನಾವಣೆಗಳು ಬಂದ್ರೂ ಬಿಜೆಪಿ 140 ಸ್ಥಾಲಗಳನ್ನಹ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ರಾಜ್ಯಾಧ್ಯಕ್ಷರ ಪ್ರವಾಸದಲ್ಲಿ ಮಾಜಿ ಸಚಿವ,ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರಗೇಶ ನಿರಾಣಿ,ಸಂಸದ ಗದ್ದಿಗೌಡರ್,ಮಾಜಿಡಿಸಿಎಂ ಗೋವಿಂದ ಕಾರಜೋಳ,ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಸಾಥ್ ನೀಡಿದ್ರು.ಇನ್ನು ವಿಜಯೇಂದ್ರ ಅವರು ಬಾಗಲಕೋಟೆಗೆ ಭೇಟಿ ನೀಡಿದ್ದು ಕಾರ್ಯಕರ್ತರ ಹುರುಪು,ಹುಮ್ಮಸ್ಸು ಇಮ್ಮಡಿಯಾಗುವಂತೆ ಮಾಡಿದೆ.ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಬಿಜೆಪಿ ರಣಕಹಳೆ ಮೊಳಗಿಸಿದೆ.