ಬೆಂಗಳೂರು : ಇದೀಗ ಎಲ್ಲಿ ನೋಡಿದ್ರೂ ವಿಶ್ವಕಪ್ ಕ್ರಿಕೆಟ್ ನದ್ದೇ ಹವಾ ಜೋರಾಗಿದೆ. ಒಂದೇ ಒಂದು ಸೋಲು ಕಾಣದ ಟೀಂ ಇಂಡಿಯಾ ಮೊದಲ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯ ನಾಳೆ ಸಿಲಿಕಾನ್ ಸಿಟಿಯಲ್ಲಿ ನಡೀತಾಯಿದೆ. ಈ ಮ್ಯಾಚ್ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ.
ದಿನದಿಂದ ದಿನಕ್ಕೆ ವಿಶ್ವಕಪ್ ಲೀಗ್ ರಂಗೇರುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಲಾಸ್ಟ್ ಪಂದ್ಯದಲ್ಲಿ ಇಂಡಿಯಾ ಟೀಂ ನೆದರ್ಲ್ಯಾಂಡ್ ತಂಡವನ್ನು ಫೇಸ್ ಮಾಡುತ್ತಿದೆ. ಇದುವರೆಗೆ ಟೂರ್ನಿಯಲ್ಲಿ ಒಂದೇ ಒಂದು ಸೋಲುಣ್ಣದ ಟೀಂ ಇಂಡಿಯಾ ಮೊದಲ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನು ನಾಳೆ ಉದ್ಯಾನನಗರಿಯಲ್ಲಿ ಈ ಪಂದ್ಯ ನಡೆಯುತ್ತಿರುವುದು ಭಾರಿ ಕುತೂಹಲ ಮೂಡಿಸಿದೆ.
ಇನ್ನು ನೆದರ್ಲೆಂಡ್ಸ್ ತಂಡ ಕೇವಲ 2 ಗೆಲುವುಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದು, ವಿಶ್ವಕಪ್ನಿಂದ ಹೊರಬಿದ್ದಿದೆ.
ನೆದರ್ಲೆಂಡ್ಸ್ ತಂಡಕ್ಕೆ ನಾಳಿನ ಪಂದ್ಯ ಕೇವಲ ಔಪಚಾರಿಕವಾಗಿದೆ. ಆದರೆ ಭಾರತಕ್ಕೆ ಮಾತ್ರ ತನ್ನ ಅಜೇಯ ಓಟವನ್ನು ಮುಂದುವರೆಸಲು ಇದು ಒಳ್ಳೆ ಅಪರ್ ಚ್ಯುನಿಟಿ ಆಗಿದೆ. ಏಕೆಂದರೆ ಈ ಪಂದ್ಯದ ಬಳಿಕ ರೋಹಿತ್ ಪಡೆ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಬೇಕಾಗಿದೆ. ಅತ್ತ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ನೆದರ್ಲೆಂಡ್ಸ್, ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಹೀಗಾಗಿ ಬೆಂಗಳೂರು ಪಿಚ್ನಲ್ಲಿ ಭಾರತವು ಟಫ್ ಪೈಪೋಟಿ ನೀಡಲು ರೆಡಿಯಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಂದ್ಯವನ್ನು ತಮ್ಮದೇ ನೆಲದಲ್ಲಿ ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಭಾನುವಾರ ದೀಪಾವಳಿ ಹಬ್ಬ ಆಚರಿಸಲು ಬೆಂಗಳೂರಿನಲ್ಲಿರುವ ಭಾರತ ತಂಡದ ಅಧಿಕೃತ ಹೋಟೆಲ್ಗೆ ಭೇಟಿ ನೀಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತದ ತಂಡದ ಮೊದಲ ಹಾಗೂ ಕೊನೆಯ ಮ್ಯಾಚ್ ಇದಾಗಿದ್ದು, ಮ್ಯಾಚ್ ನೋಡಲು ಜನ ಕಾತುರರಾಗಿದ್ದಾರೆ. ಟಿಕೇಟ್ ಕೂಡ ಸೋಲ್ಡ್ ಔಟ್ ಆಗಿವೆ. ಇನ್ನು ಕೆಲವರು ಸ್ಟೇಡಿಯಂ ಎದುರು ಟಿಕೇಟ್ ಗಾಗಿ ಕಾದು ಪರದಾಡ್ತಿರೊದು ಕಂಡು ಬಂದಿತು.
ಇನ್ನು ಸತತವಾಗಿ ಅಜೇಯವಾಗಿರುವ ಟೀಂ ಇಂಡಿಯಾ ದಾಖಲೆಯೊಂದಿಗೆ ಏಕದಿನ ವಿಶ್ವಕಪ್ ಗೆದ್ದ ಮೂರನೇ ತಂಡವೆನಿಸಿಕೊಳ್ಳಲು ಕಾತುರವಾಗಿದೆ.
ವರದಿ : ಹರ್ಷಿತಾ ಪಾಟೀಲ್, ಬೆಂಗಳೂರು