ಬೆಂಗಳೂರು : ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BJP state president B Y Vijayendra) ಪ್ರತಿಕ್ರಿಯೆ ನೀಡಿದ್ದಾರೆ
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರ ಬಂದ ದಿನಗಳಿಂದಲೂ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಮೊನ್ನೆ ಐಟಿ ದಾಳಿ ಮಾಡಿದಾಗ ಸಿಕ್ಕ ಹಣದ ಮೂಲ ಯಾವುದು..? ಸಿಎಂ, ಡಿಸಿಎಂ ಐಟಿ ದಾಳಿ ಸ್ವಾಗತ ಮಾಡಿದ್ರಾ..?
ಬದಲಾಗಿ ಟೀಕೆ ಮಾಡಿದ್ರು. ಯಾಕೆ ಟೀಕೆ ಮಾಡಿದ್ರು ಅಂದರೆ ಅವರಿಗೆ ನೋವು ಆಗಿದೆ ಅಂತಾ ತಾನೇ, ಇದರ ಅರ್ಥ ಏನು..? ಇವರ ಹಣ ಅವರದ್ದೇ ತಾನೇ..?ಬರುವಂತ ದಿನಗಳಲ್ಲಿ ರಾಜ್ಯದ ಜನರಿಗೆ ಗೊತ್ತಾಗುತ್ತದೆ. ಮತ್ತೊಂದು ಕಡೆ ಭೀಕರ ಬರಗಾಲ ಇದೆ. ರೈತರು ಸಂಕಷ್ಟದಲ್ಲಿದ್ದಾರೆ, ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ದಾವಣಗೆರೆಯ ಹೊನ್ನಾಳಿಯ ರೈತರಿಗೆ ನೀರು ಕೊಟ್ಟರೆ ಆ ಭಾಗದ ಜನರು ಬದುಕಿಕೊಳ್ತಾರೆ. ಆದರೆ ಇದರ ಬಗ್ಗೆ ಯೋಚನೆ ಮಾಡದೇ ಅಧಿಕಾರದ ಅಮಲಿನಲ್ಲಿ ತೇಲುತ್ತಿರೋದು ದುರದೃಷ್ಟಕರ. ಇವಾಗ್ಲಾದ್ರು ಎಚ್ಚೆತ್ತುಕೊಂಡು ರೈತರನ್ನು ಕಾಪಾಡಬೇಕು ಎಂದಿದ್ದಾರೆ.