Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political News

ಮೈಕೊಡವಿ ಚುನಾವಣೆಯಲ್ಲಿ ಕೆಲಸ ‌ಮಾಡಿ.ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಈಶ್ವರ್ ಖಂಡ್ರೆ

ಬೆಂಗಳೂರು : ದೇಶದಲ್ಲಿ ಹರಾಜುಕತೆಯಿದೆ, ಪಾರ್ಲಿಮೆಂಟ್ ನಲ್ಲಿ ವಿಪಕ್ಷ ಧ್ವನಿ ಅಡಗಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ವಿರುದ್ಧ ಸಚಿವ ಈಶ್ವರ್ ಖಂಡ್ರೆ ಕಿಡಿ ಕಾರಿದರು.

ಕಾಂಗ್ರೆಸ್ ಸಂಸ್ಥಾಪಾನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಶ್ರೇಷ್ಠ ಇತಿಹಾಸವಿದೆ. ಅನೇಕ ಜನ ರಾಷ್ಟ್ರಕ್ಕೆ ತ್ಯಾಗ ಮಾಡಿದ್ದಾರೆ‌. ಅಧುನಿಕ ಭಾರತ ನಿರ್ಮಾಣದ ಕೀರ್ತಿ ಜವಹರಲಾಲ್ ನೆಹರು ಅವರಿಗೆ ಸಲ್ಲುತ್ತದೆ.

ನಮ್ಮ ವಿರೋಧಿಗಳು ಕಾಂಗ್ರೆಸ್ 75 ವರ್ಷ ಏನು ಮಾಡಿದೆ ಎಂದು ಕೇಳ್ತಾರೆ. ಹಸಿರು ಕ್ರಾಂತಿ ಮಾಡಿ ಧಾನ್ಯಗಳ ರಪ್ತು ಮಾಡಿಸಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಸಾಕ್ಷರತೆಯನ್ನ ಹೆಚ್ಚಿಸಿದ್ದು ಕಾಂಗ್ರೆಸ್. ಬ್ಯಾಂಕುಗಳನ್ನ ರಾಷ್ಟ್ರೀಕರಣ ಮಾಡಿದ್ರು. ಶತ್ರು ರಾಷ್ಟ್ರವಾದ ಪಾಕಿಸ್ತಾನವನ್ನ ಸೋಲಿಸಿ ಬಾಂಗ್ಲಾದೇಶ ದೇಶ ನಿರ್ಮಾಣ ಇಂದಿರಾಗಾಂಧಿ ಮಾಡಿದ್ರು. ಇವತ್ತು ಡಿಜಿಟಲ್ ಇಂಡಿಯಾ ಎನ್ನುತ್ತಾರೆ. ಸಂಪರ್ಕ ಕ್ರಾಂತಿ ಮಾಡಿದ್ದು ಕಾಂಗ್ರೆಸ್. ಇವತ್ತು ಎಲ್ಲರ ಕಡೆ ಮೊಬೈಲ್ ಇದ್ದಾವೆ. ಕುಳಿತಲ್ಲೆ ಎಲ್ಲಾ ಮಾಹಿತಿ ನೋಡುತ್ತೇವೆ.

ಏನು ಇಲ್ಲದ ಸಂದರ್ಭದಲ್ಲಿ ಇಡಿ ಜಗತ್ತೆ ತಿರುಗಿ ನೋಡುವಂತೆ ಮಾಡಿದ್ದು ಕಾಂಗ್ರೆಸ್ ದೇಶದಲ್ಲಿ ಹರಾಜುಕತೆಯಿದೆ, ಪಾರ್ಲಿಮೆಂಟ್ ನಲ್ಲಿ ವಿಪಕ್ಷ ಧ್ವನಿ ಅಡಗಿಸುವ ಕೆಲಸ ಆಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗುತ್ತಿದೆ. ಬರುವ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು.

ಗೆದ್ದು ನಾಯಕರ ಕೈ ಗಟ್ಟಿಗೊಳಿಸಬೇಕು. ಸೋಲು ಗೆಲುವಿನಿಂದ ಕಾಂಗ್ರೆಸ್ ಚರಿತ್ರೆ ಬದಲಾಗುವುದಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಕೆಲವು ಸೋಲಾಗಿದೆ. ಮೈಕೊಡವಿ ಚುನಾವಣೆಯಲ್ಲಿ ಕೆಲಸ ‌ಮಾಡಿ.ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು

ವರದಿ : ಬಸವರಾಜ ಹೂಗಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!