ಬೆಂಗಳೂರು : ಡಿಸಿಎಂ ಡಿಕೆಶಿವಕುಮಾರ್ ಪುತ್ರಿ ಐಶ್ವರ್ಯ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಂದು ಬೆಂಗಳೂರಲ್ಲಿ ಯುವ ನಾಯಕತ್ವ ಸಮ್ಮೇಳನ ಆಯೋಜಿಸಲಾಗಿದೆ.
ಹಲಸೂರಿನ ಕಾನ್ರಾಡ್ ಹೋಟೆಲ್ ನಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಶಾಲಾ ಮಟ್ಟದ ಅಂತಿಮ ಸುತ್ತಿನ ಐಡಿಯಾಥಾನ್ ಆಯೋಜನೆ ಮಾಡಲಾಗಿದೆ.
ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬ್ರ್ಯಾಂಡ್ ಬೆಂಗಳೂರು ಕುರಿತು ಉತ್ತಮ ಬೆಂಗಳೂರಿಗಾಗಿ ಐಡಿಯಾಗಳನ್ನ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸುಧಾಮೂರ್ತಿ, ನಟ ರಮೇಶ್ ಅರವಿಂದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಭಾಗಿಯಾಗಲಿದ್ದಾರೆ.