ಬೆಂಗಳೂರು : ಡಿ. 6ಕ್ಕೆ ಮಾಜಿ ಸಿಎಂ ಹೆಚ್ಡಿಕುಮಾರಸ್ವಾಮಿ (CM HD Kumaraswamy) ದತ್ತಮಾಲೆ ಧರಿಸುವ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಕುಮಾರಸ್ವಾಮಿ ದತ್ತಮಾಲೆ ಧರಿಸುತ್ತೇನೆ ಎಂದಿದ್ದಕ್ಕೆ ಸ್ವಾಗತಿಸುತ್ತೇನೆ. ದತ್ತಮಾಲೆ ಧರಿಸುವುದು ಇದು ಭಾರತದ ಪರಂಪರೆಯಾಗಿದೆ. ನಮ್ಮ ತಂದೆ ತಾತಾ ಎಲ್ಲರೂ ಮಾಲೆ ಧರಿಸಿದ್ದರು.
ಶಿವಮಾಲೆ, ದತ್ತಮಾಲೆ, ಶಬರಿಮಾಲೆ ಹೀಗೆ ಅನೇಕ ಮಾಲೆ ಧರಿಸುವುದು ನಮ್ಮ ಪರಂಪರೆಯಾಗಿದೆ. ದೇವರ ಮೇಲೆ ಭಕ್ತಿ ತೋರಿಸುವುದಕ್ಕೆ ಭೇದ ಭಾವ ಬೇಡ. ಆ ತರ ಮಾಡುವುದು ಏನಿದ್ದರು ಕಾಂಗ್ರೆಸ್ಸಿಗರು. ಹಿಂದೂ ದ್ವೇಷ ಮಾಡೋದು, ಮುಸ್ಲಿಂರಿಗೆ ಸೆಲ್ಯುಟ್ ಹೊಡೆದು ನಿಲ್ಲಬೇಕು ಎಂಬ ದುರಂಕಾರದ ಹೇಳಿಕೆಗೆ ನಮ್ಮಲ್ಲಿ ಅವಕಾಶ ಇಲ್ಲ. ಸಮರ್ಥ ವಿಪಕ್ಷ ನಾಯಕನಾ ಕೆಲಸ ಮಾಡುವ ಪ್ರಯತ್ನ ಮಾಡ್ತೇನೆ. ಅಶ್ವತ್ಥನಾರಾಯಣ ಅವರಿಗೆ ಈ ಬಗ್ಗೆ ಹೇಳಿದ್ದೇನೆ. ಸದನದಲ್ಲಿ ಜಮೀರ್ ಹೇಳಿಕೆ ವಿಚಾರ ಚರ್ಚೆ ಮಾಡ್ತೇವೆ. ರಾಜ್ಯದ ಜನರ ಸಮಸ್ಯೆ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸುತ್ತೇನೆ ಎಂದಿದ್ದಾರೆ.