ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆಯ ಡಾ. ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆ (Jana sankalpa yathre) ನಡೆಯಲಿದೆ. ನಾಡದೊರೆ ಬಸವರಾಜ್ ಬೊಮ್ಮಾಯಿ (Basavaraj bommai) , ರಾಜಾಹುಲಿ ಬಿಎಸ್. ಯಡಿಯೂರಪ್ಪ (BS.Yediyurappa) ನೇತೃತ್ವದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯುತ್ತಿದೆ.
ಹಾಲಿ, ಮಾಜಿ ಸಿಎಂಗಳು ಸರ್ಕಾರದ ಸಾಧನೆಗಳನ್ನು ಹೇಳಲಿದ್ದಾರೆ. ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ. 25 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಳೆಯಿಂದ ಸಂರಕ್ಷಣೆಗೆ ಟೆಂಟ್ ನಿರ್ಮಾಣ ಮಾಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಖಾಕಿ, ಫುಲ್ ಅಲರ್ಟ್ ಆಗಿದೆ. ವಿಜಯನಗರ ಎಸ್ಪಿ ಡಾ. ಕೆ. ಅರುಣ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ. 4 Dysp, 10 CPI, 18 PSI ಮಹಿಳಾ ಸಿಬ್ಬಂದಿ ಸೇರಿದಂತೆ 600 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 2 KSRP ತುಕಡಿಗಳು, 2 DAR ತುಕಡಿಗಳನ್ನ ಪೊಲೀಸ್ ಇಲಾಖೆ ನಿಯೋಜನೆ ಮಾಡಿದೆ. ಇದನ್ನೂ ಓದಿ :- ಮುಂದುವರಿದ ಮಳೆ ಅವಾಂತರ – ಉಕ್ಕಿ ಹರಿಯುತ್ತಿರುವ ಹಳ್ಳಗಳು, ಜನಜೀವನ ಅಸ್ತವ್ಯಸ್ತ
ವಿಜಯನಗರದ ದಲಿತ ಮಹಿಳೆ ಯಲ್ಲಮ್ಮ ಕೊಲ್ಲೂರಪ್ಪ ಎಂಬುವರ ಮನೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಉಪ್ಪಿಟ್ಟು, ವಗ್ಗರಣಿ ಮಿರ್ಚಿ ಟೀ ಯನ್ನು ಸೇವಿಸಿದ್ದಾರೆ.
ಇದನ್ನೂ ಓದಿ :- ಒತ್ತುವರಿ ತೆರವು ನಿಲ್ಲಿಸಿ…ಇಲ್ಲವಾದ್ರೆ ನಾವು ಬೆಂಕಿ ಹಚ್ಚಿಕೊಳ್ಳುತ್ತೇವೆ – BBMP ಗೆ ಬೆದರಿಕೆ ಹಾಕಿದ ದಂಪತಿ