ಕಳಸಾ ಬಂಡೂರಿ ಯೋಜನೆ ಡಿಪಿಆರ್ಗೆ ಕೇಂದ್ರದ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಬಹುದಿನಗಳ ಕನಸು ನನಸಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ತಿಳಿಸಿದ್ರು. ವಿಧಾನಸಭೆ (Vidhanasabhe) ಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಸಿಎಂ, 1.7 ಟಿಎಂಸಿ ಕಳಸಾ ಡ್ಯಾಮ್ನಿಂದ ನೀರು ಪಡೆಯುವ ಯೋಜನೆ ಇದಾಗಿದ್ದು, 2.18 ಬಂಡೂರಿ ಡ್ಯಾಮ್ ನಿಂದ ನೀರು ಪಡೆಯುವ ಯೋಜನೆಯಾಗಿದೆ.
ಯೋಜನೆಯ ಡಿಪಿಆರ್ ಕೇಂದ್ರಕ್ಕೆ ಸಲ್ಲಿಕೆ ಮಾಡಿದ್ದೆವು, ಇದೀಗ ನರೇಂದ್ರ ಮೋದಿ (Narendra modi) ನೇತೃತ್ವದ ಸರಕಾರ ಡಿಪಿಆರ್ ಒಪ್ಪಿಕೊಂಡಿದೆ ಎಂದು ತಿಳಿಸಿದರು. ಈ ಮೂಲಕ ಬಹಳ ದಿನಗಳ ಕನಸು ನನಸಾಗಿದೆ. ಉತ್ತರ ಕರ್ನಾಟಕದ ಪರವಾಗಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದಕ್ಕೆ ಸಹಕಾರ ಕೊಟ್ಟ ಕೇಂದ್ರ ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ರು. ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುತ್ತೇವೆ. ಯೋಜನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಸರಕಾರ ಬದ್ಧವಾಗಿದೆ. ಬೆಳಗಾವಿ ಅಧಿವೇಶನ (Belagavi session) ದ ವೇಳೆಗೆ ಸಿಹಿ ಸುದ್ದಿ ಬಂದಿದೆ ಎಂದು ಸ್ಪಷ್ಟಪಡಿಸಿದ್ರು. ಇದನ್ನು ಓದಿ : – ||SUMALATHA || ಬಿಜೆಪಿಗೆ ಸೇರ್ತಾರಾ ಸುಮಲತಾ? ಅಮಿತ್ ಶಾ ಸ್ವಾಗತದ ಫ್ಲೆಕ್ಸ್ ನಲ್ಲಿ ರಾರಾಜಿಸುತ್ತಿದೆ ಫೋಟೋ
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಿಎಂ ಬೊಮ್ಮಾಯಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಬೊಮ್ಮಾಯಿ ಅವರು ಸಿಎಂ ಆಗದಿದ್ದಿದ್ರೆ ಕಳಸಾ ಬಂಡೂರಿ ಯೋಜನೆಗೆ ಮುಕ್ತಿ ಸಿಕ್ತಿರಲಿಲ್ಲ. ಬೊಮ್ಮಾಯಿ ಆಡಳಿತಗಾರರೂ ಹೌದು, ತಾಂತ್ರಿಕ ಪರಿಣಿತರೂ ಹೌದು, ನೀರಾವರಿ ತಜ್ಞರೂ ಹೌದು. ಬೊಮ್ಮಾಯಿ ಮಾರ್ಗದರ್ಶನದಲ್ಲಿ ಡಿಪಿಆರ್ ಮರು ಪರಿಷ್ಕರಣೆ ಮಾಡಲಾಗಿದೆ ಎಂದು ಕೊಂಡಾಡಿದ್ರು.
ಇದನ್ನು ಓದಿ : – ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ KSRTC ಮಾಸ್ಟರ್ ಸ್ಟ್ರೋಕ್