ನಟ ಪುನೀತ್ ರಾಜ್ ಕುಮಾರ್ (Puneeth rajkumar) ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನವೆಂಬರ್ 1ರಂದು ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ‘ಪವರ್ ಸ್ಟಾರ್’ ಅಭಿಮಾನಿಗಳು ಕಾದಿದ್ದಾರೆ.
ಅಪ್ಪು ಫ್ಯಾನ್ಸ್ಗೆ ಇದು ಹೆಮ್ಮೆಯ ಕ್ಷಣ. ಈ ಸಮಾರಂಭಕ್ಕೆ ಖ್ಯಾತ ನಟ ರಜನಿಕಾಂತ್ (Rajinikanth) ಅಥವಾ ಜೂನಿಯರ್ ಎನ್ ಟಿ ಆರ್ (Junior NTR) ಆಗಮಿಸುವ ಸಾಧ್ಯತೆ ಇದೆ ಈ ಇಬ್ಬರು ಸ್ಟಾರ್ ಕಲಾವಿದರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಆಹ್ವಾನ ಹೋಗಿದೆ. ಇದನ್ನೂ ಓದಿ : – BREAKING – ಬೆಂಗಳೂರಿನ ಎಂಪೈರ್ ಹೋಟೆಲ್ ನಲ್ಲಿ ಅಗ್ನಿ ಅವಘಡ
ಪುನೀತ್ ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವುದು ವಿಶೇಷ. ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini puneeth rajkumar) ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಡಾ. ರಾಜ್ ಕುಮಾರ್ಕುಟುಂಬದ ಸದಸ್ಯರು ಈ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.
ಇದನ್ನೂ ಓದಿ : – ಕೆಂಪೇಗೌಡ ವಿಮಾನ ನಿಲ್ದಾಣ ಕರ್ನಾಟಕದ ಐತಿಹಾಸಿಕ ಸ್ಥಳವಾಗಲಿದೆ – ಅಶ್ವಥ್ ನಾರಾಯಣ್