ವಿಶ್ವವಿಖ್ಯಾತ ಮೈಸೂರು ( mysuru ) ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ತೂಕ ಪರೀಕ್ಷಿಸಲಾಗಿದೆ. ಈ ಬಾರಿಯೂ ಅರ್ಜುನನೇ ಬಲಶಾಲಿಯಾಗಿದ್ದಾನೆ.
ಅರಣ್ಯ ಇಲಾಖೆ ಆಯೋಜಿಸಿದ್ದ ತೂಕ ತಪಾಸಣೆ ವೇಳೆ 5,725 ಕೆಜಿ ತೂಕದ ಅರ್ಜುನ ಇತರೆ ದಸರಾ ಆನೆಗಳನ್ನು ಮೀರಿಸಿದೆ. ಮೈಸೂರು ಅರಮನೆಗೆ ಆಗಮಿಸಿದ ದಸರಾ ಆನೆಗಳ ಮೊದಲ ತಂಡದ ಎಲ್ಲಾ ಒಂಬತ್ತು ಆನೆಗಳನ್ನು ಧನ್ವಂತ್ರಿ ರಸ್ತೆಗೆ ಕರೆತಂದು ಅಲ್ಲಿ ತೂಕದ ಸೇತುವೆಯ ಮೇಲೆ ಎಲ್ಲಾ ಆನೆಗಳ ತೂಕವನ್ನು ಅಳೆಯಲಾಯಿತು.
ಕಳೆದ ವರ್ಷದಂತೆ ಅರ್ಜುನ 5,725 ಕೆ.ಜಿ.ತೂಕದೊಂದಿಗೆ ಇತರೆ ಆನೆಗಳಿಗಿಂತ ತಾನು ಬಲಶಾಲಿ ಎಂದು ಸಾಬೀತು ಪಡಿಸಿದ್ದಾನೆ. ಉಳಿದಂತೆ ಕಾವೇರಿ 3100, ಅಭಿಮನ್ಯು 4770, ಮಹೇಂದ್ರ 4250, ಲಕ್ಷ್ಮೀ 2920, ಚೈತ್ರ 3050, ಭೀಮ 3920, ಧನಂಜಯ 4810 ಗೋಪಾಲಸ್ವಾಮಿ, 5140 ಕೆ.ಜಿ ತೂಕ ಹೊಂದಿವೆ. ಆನೆಗಳಿಗೆ 14ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಇದನ್ನೂ ಓದಿ : – ಬಿಜೆಪಿಯಲ್ಲಿ ಯಡಿಯೂರಪ್ಪ ಅವರದ್ದು ಮುಗಿದ ಅಧ್ಯಾಯ – ಎಂ. ಬಿ ಪಾಟೀಲ್
ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಆನೆಗಳ ಆರೋಗ್ಯ ಕಾಪಾಡುವುದಷ್ಟೇ ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ( dasara ) ಮುಗಿಯುವುದರೊಳಗೆ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ. ವಿಶೇಷ ಪೌಷ್ಟಿಕಾಂಶದ ಆಹಾರವನ್ನು ಪಡೆದ ನಂತರ, ಆನೆಗಳು 400-500 ಕೆಜಿ ತೂಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ನಾವು ಅವರು ದಪ್ಪವಾಗಿ ಬೆಳೆಯಲು ಬಯಸುವುದಿಲ್ಲ, ಆದರೆ ಆರೋಗ್ಯವಾಗಿರಲು ಬಯಸುತ್ತೇವೆ ಎಂದು ಹೇಳಿದ್ರು.
ಇದನ್ನೂ ಓದಿ : – ಹೈಕೋರ್ಟ್ ನಿಂದ ಎಸಿಬಿ ರದ್ದುಗೊಳಿಸಿ ಆದೇಶ – ಈ ಬಗ್ಗೆ ಸಿಎಂ ಪರಿಶೀಲನೆ ನಡೆಸುತ್ತಿದ್ದಾರೆ – ಆರಗ ಜ್ಞಾನೇಂದ್ರ