ಹೊಸಪೇಟೆಯಲ್ಲಿ (Hospete) ಇಂದು ಸಂಜೆ ದೊಡ್ಮನೆ ಹುಡ್ಗನ ಪುತ್ಥಳಿ ಅನಾವರಣ ನಡೆಯಲಿದೆ . 7.04 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ (PUNEETH RAJKUMAR) ವೃತ್ತದಲ್ಲಿ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದೆ .
ಆಂಧ್ರಪ್ರದೇಶದ ಗುಂಟೂರಿನ (Andhra pradesh) ತೆನಾಲಿಯಿಂದ ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ತಂದಿದ್ದಾರೆ . ರಾಜ್ ಕುಮಾರ್ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಪುತ್ಥಳಿ ಅನಾವರಣ ಮಾಡಲಿದ್ದಾರೆ . ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini puneeth rajkumar) , ಡಾ. ಶಿವರಾಜ್ ಕುಮಾರ್ (Shivrajkumar) , ರಾಘವೇಂದ್ರ ರಾಜ್ ಕುಮಾರ್ (Raghavendra rajkumar) ಸೇರಿದಂತೆ ನಟ ಶ್ರೀಮುರುಳಿ(Srimurali) , ಅಜಯ್ ರಾವ್, ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಚೇತನ್, ಸಚಿವ ಆನಂದ್ ಸಿಂಗ್ ಅವರಿಗೆ ಅಭಿಮಾನಿಗಳು ಆಹ್ವಾನ ನೀಡಿದ್ದಾರೆ . ಇದನ್ನೂ ಓದಿ : – ಪವನ ಕಲ್ಯಾಣ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ