ಸರ್ಕಾರ ಬಿಬಿಎಂಪಿ (BBMP) ಯಲ್ಲಿ “ಚಿಲುಮೆ” (Chilume) ಎಂಬ ಖಾಸಗಿ ಸಂಸ್ಥೆ ಮೂಲಕ ಅಕ್ರಮ ಎಸಗಲು ಹೊರಟಿದೆ ಎಂದು ವಿಜಯಪುರ (Vijayapura) ಜಿಲ್ಲೆಯಲ್ಲಿ ಶಾಸಕ ಎಂಬಿ ಪಾಟೀಲ್ (MB.Patil) ಆರೋಪಿಸಿದ್ದಾರೆ. ಯಾವುದೇ ಟೆಂಡರ್ ಕರೆಯದೇ, ಸಂಸ್ಥೆಯ ಬಗ್ಗೆ ಮಾಹಿತಿ ಪಡೆಯದೇ ಕೇವಲ ಅರ್ಜಿ ಸಲ್ಲಿಸಿದ ಮರುದಿನವೇ ಆ ಸಂಸ್ಥೆಗೆ ಜವಾಬ್ದಾರಿ ನೀಡಿದ್ದು ಅಕ್ರಮವಲ್ಲವೇ ? ಆ ಸಂಸ್ಥೆ ಮೂಲಕ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿದ್ದು ಅಕ್ರಮವಲ್ಲವೇ ಎಂದು ಪ್ರಶ್ನಿಸಿದ್ರು.
ಅಲ್ಪಸಂಖ್ಯಾತರಿದ್ದಲ್ಲಿ, ದಲಿತ (Dalit) ರಿದ್ದಲ್ಲಿ, ಕೊಳಚೆ ಪ್ರದೇಶದಲ್ಲಿರುವ ಮತದಾರರ ಹೆಸರು ಡಿಲೀಟ್ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಬಿಎಲ್ ಒ ಗಳು ಸರ್ಕಾರಿ ಹಾಗೂ ಅರೆ ಸರ್ಕಾರಿ ಆಗಿರುತ್ತಾರೆ. ಆದರೆ ಇಲ್ಲಿ ಚಿಲುಮೆ ಸಂಸ್ಥೆ ಅವರು ಬಿಎಲ್ ಒ (BLO) ಜವಾಬ್ದಾರಿ ಕೂಡ ನಿಭಾಯಿಸುತ್ತಿರುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ರು. ಈ ಎಲ್ಲ ಕಾರಣಗಳಿಂದಾಗಿ ಕಾಂಗ್ರೆಸ್ ನಿಂದ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಈಗಾಗಲೇ ತನಿಖೆ ಕೂಡ ನಡೆದು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಇಂಥ ವ್ಯವಸ್ಥೆ ಹುಟ್ಟುಹಾಕಿರುವುದು ದುರಂತ. ಇದು ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಕೆಲಸ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಕಂಡು ಬಂದಿದೆ. ಇದನ್ನೂ ಓದಿ : – ಮಹಾರಾಷ್ಟ್ರ ನಾಯಕರು ಖಾಲಿ ಓಲಗ ಊದುತ್ತಿದ್ದಾರೆ- ಸಿಎಂ ಇಬ್ರಾಹಿಂ ವ್ಯಂಗ್ಯ
ವಿಜಯಪುರದಲ್ಲೂ ದೂರು ನೀಡಲಾಗಿದೆ. ಚುನಾವಣೆ ಅಧಿಕಾರಿಗಳು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದ ಬಿಜೆಪಿ ಇದೀಗ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಮೂಲಕ ಮತ್ತೆ ವಾಮ ಮಾರ್ಗವಾಗಿ ಅಧಿಕಾರಕ್ಕೆ ಬರಲು ಯತ್ನಿಸಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ : – ಮಧುರೆಯಲ್ಲಿ ಶ್ರೀ ಶನಿ ಮಹಾತ್ಮ ದೇವರ ದರ್ಶನ ಪಡೆದ ಹೆಚ್.ಡಿ ಕುಮಾರಸ್ವಾಮಿ