ಪ್ರವೀಣ್ ನೆಟ್ಟಾರು ( praveen nettur ) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇಬ್ಬರು ಬಂಧಿಸಲಾಗಿತ್ತು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಬೀದ್ (22), ನೌಫಾಲ್ (28) ಬಂಧಿತ ಆರೋಪಿಗಳು. ಅಬಿದ್ ನಾವೂರು ನಿವಾಸಿ ಯಾಕೂಬ್ ಮಗ. ನೌಫಾಲ್ ಬೆಳ್ಳಾರೆಯ ಗೌರಿಹೊಳೆ ನಿವಾಸಿ ಮೊಹಮ್ಮದ್ ಮಗನಾಗಿದ್ದಾನೆ.
ಹಂತಕರು ಕೊಲೆ ಮಾಡಲು ಅಬೀದ್ ಬಳಿ ಇದ್ದ ಕೇರಳ ರಿಜಿಸ್ಟ್ರೇಷನ್ ಬೈಕ್ ನ್ನು ಬಳಿಸಿದ್ದಾರೆ. ಅದೇ ಬೈಕ್ ನಲ್ಲಿ ಬಂದು ಕೊಲೆ ಮಾಡಿ ಮೂವರು ಹಂತಕರು ಹೋಗಿದ್ದಾರೆ. ಅಬೀದ್ ಗೆ ಹಂತಕರ ಜೊತೆ ನೇರಾನೇರ ಟಚ್ ಇತ್ತು ಎನ್ನಲಾಗುತ್ತಿದೆ. ನೌಫಾಲ್ ಗೂ ಕೂಡ ಹಂತಕರ ಜೊತೆ ನೇರಾನೇರ ಸಂಪರ್ಕವಿತ್ತು. ಹಂತಕರಿಗೆ ಪ್ರವೀಣ್ ಅಂಗಡಿ ಬಗ್ಗೆ ನೌಫಾಲ್ ಮಾಹಿತಿ ನೀಡಿದ್ದ. ಅಂಗಡಿ ಬಳಿ ಬಂದು ಪ್ರವೀಣ್ ಇದ್ದಾನಾ ಇಲ್ವಾ ಅಂತಾ ನೌಫಾಲ್ ನದ್ದು ಮಾಹಿತಿ ಕೊಡೊ ಕೆಲಸ ಮಾಡಿದ್ದಾನೆ. ನೌಫಾಲ್ ಸ್ಥಳೀಯನೇ ಆಗಿದ್ದರಿಂದ ಅಲ್ಲಿನ ಸಂಪೂರ್ಣ ಮಾಹಿತಿ ಸಿಗುತ್ತಿತ್ತು ಎಂದು ಆರೋಪಿಸಲಾಗುತ್ತಿತ್ತು.
ಇದನ್ನು ಓದಿ : – ಬಸವರಾಜ ಹೊರಟ್ಟಿ ಕಾರು ಅಪಘಾತ – ಬೈಕ್ ಸವಾರನಿಗೆ ಗಾಯ ಕಿಮ್ಸ್ ಗೆ ದಾಖಲು