ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) , ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ (DK.shivakumar) ಸಮ್ಮುಖದಲ್ಲಿ ಯು.ಬಿ.ಬಣಕಾರ್ (UB.Banakar) ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ನೂರಾರು ಬೆಂಬಲಿಗರ ಜೊತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಯು.ಬಿ.ಬಣಕಾರ್ ಬಿಜೆಪಿ ತೊರೆದಿದ್ದರು.
ಯು.ಬಿ. ಬಣಕಾರ್ ಹಿರೆಕೆರೂರಿನ ಮಾಜಿ ಶಾಸಕರಾಗಿದ್ದಾರೆ. ಬಿ.ಸಿ.ಪಾಟೀಲ್ ಬಿಜೆಪಿ ಗೆ ಬಂದ ಹಿನ್ನೆಲೆಯಲ್ಲಿ ಯು.ಬಿ.ಬಣಕಾರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಹಿರೆಕೆರೂರು ಕಾಂಗ್ರೆಸ್ ಟಿಕೆಟ್ ಬಹುತೇಕ ಕನ್ಫರ್ಮ್ ಆಗಿದೆ.
ಯು.ಬಿ.ಬಣಕಾರ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದೆ – ಡಿಕೆ. ಶಿವಕುಮಾರ್
ಕಾಂಗ್ರೆಸ್ ಪಕ್ಷ ಖಾಲಿಯಾಗಿದೆ ಅಂತಿದ್ರು. ಇದೀಗ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಹೇಳಿದ್ದಾರೆ. ಹಿರೆಕೆರೂರು BJP ನಾಯಕ ಬಣಕಾರ್ ಕಾಂಗ್ರೆಸ್ ಸೇರುತ್ತಿದ್ದಾರೆ. ಬಣಕಾರ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದೆ. ಅಲ್ಲಿನ ಸ್ಥಳೀಯ ನಾಯಕರ ಜೊತೆ ಮಾತನಾಡಿದ್ದೆ. ಬನ್ನಿಕೋಡ್ ಜೊತೆಯೂ ನಾನು ಚರ್ಚೆ ನಡೆಸಿದ್ದೆ. ಅವರ ಜೊತೆ ಹಲವು ನಾಯಕರು ಸೇರ್ಪಡೆಯಾಗ್ತಿದ್ದಾರೆ ಎಂದು ಡಿಕೆ. ಶಿವಕುಮಾರ್ ತಿಳಿಸಿದ್ದಾರೆ.
ದ್ರೋಹ ಮಾಡಿದ ಪಕ್ಷವನ್ನೇ ಅಧಿಕಾರಕ್ಕೆ ತರುವೆ – ಯು.ಬಿ.ಬಣಕಾರ್
ನಾನು ಕಾಂಗ್ರೆಸ್ ಸೇರ್ಪಡೆಯಾಗ್ತಿದ್ದೇನೆ. ಪಕ್ಷಕ್ಕೆ ಸೇರಲು ಎಲ್ಲ ನಾಯಕರು ಅವಕಾಶ ಕೊಟ್ಟಿದ್ದಾರೆ ಎಂದು ಯು.ಬಿ.ಬಣಕಾರ್ ಹೇಳಿದ್ದಾರೆ. ನಾನು BJP ಯಲ್ಲಿ 30 ವರ್ಷದಿಂದ ಇದ್ದೆ.ಕಾರ್ಯಕರ್ತನಾಗಿ ನಾನು ಅಲ್ಲಿದ್ದೆ. ಹಿರೆಕೆರೂರಿನಲ್ಲಿ ಹಲವು ಬೆಳವಣಿಗೆಯಾಯ್ತು. ಇದನ್ನೂ ಓದಿ : – ಕೇವಲ ಬಾಯಿ ಮಾತಲ್ಲಿ ಹೇಳಿದ್ರೆ ಸಾಕಾಗಲ್ಲ ಎನ್ ಕೌಂಟರ್ ಮಾಡಿ ಬುದ್ಧಿ ಕಲಿಸಿ – ಯತ್ನಾಳ್
ಬಿ.ಸಿ.ಪಾಟೀಲ್ (BC.Patil) ಅಧಿಕಾರಕ್ಕಾಗಿ ಅಲ್ಲಿಗೆ ಬಂದ್ರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಅಲ್ಲಿಗೆ ಬಂದ್ರು ಎಂದು ಆರೊಪಿಸಿದ್ರು. ದ್ರೋಹ ಮಾಡಿದ ಪಕ್ಷವನ್ನೇ ಅಧಿಕಾರಕ್ಕೆ ತರುವೆ. ಅದಕ್ಕಾಗಿ ನಾನು ಕಾಂಗ್ರೆಸ್ ಗೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಹಿರೆಕೆರೂರಿನಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಉಳಿದ ಆರು ತಿಂಗಳು ಪಕ್ಷವನ್ನ ಕಟ್ತೇವೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಬರ್ತೇವೆ ಎಂದು ಯು.ಬಿ.ಬಣಕಾರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ರಾಜ್ಯ ನಾಶವಾಗುತ್ತೆ – ಸಿದ್ದರಾಮಯ್ಯ