ಕಾಂಗ್ರೆಸ್ ( CONGRESS ) ಐಕ್ಯತಾ ಸಮಾವೇಶದಲ್ಲಿ 5 ಲಕ್ಷ ಜನರು ಭಾಗವಹಿಸಿವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ( SATHISH JARAKIHOLI ) ತಿಳಿಸಿದ್ದಾರೆ.
ಸುದ್ದಿಗೋಷ್ಟಿ ಮುಗಿದ ಬಳಿಕ ಸಮಾವೇಶದ ಸ್ಥಳ ಪರಿಶೀಲನೆ ಮಾಡುವುದಕ್ಕೆ ನೇರವಾಗಿ ನಾವು ಚಿತ್ರದುರ್ಗಕ್ಕೆ ಹೊಗ್ತಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಮಗೆ ಸಿಕ್ಕಿರುವ ಸವಲತ್ತು ಮತ್ತೆ ನಮಗೆ ಸಿಗಬೇಕು.ಅದಕ್ಕಾಗಿ ಈ ಸಮಾವೇಶ ಮಾಡ್ತಿದ್ದೇವೆ ಎಂದು ಹೇಳಿದ್ರು. ಇದನ್ನು ಓದಿ : – ಹೊಟೇಲ್ ನಿಂದ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡ್ತಾರೆ – ಡಾ.ಜಿ ಪರಮೇಶ್ವರ್..!
ಬೆಳಗಾವಿ ( BELGAVI ) ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜನಸಾಮಾನ್ಯರಿಗೆ ತೊಂದರೆಯಾಗುತ್ತೆ. ಪ್ರತಿದಿನ ಕೊಲ್ಲಾಪುರ, ಸಾಂಗ್ಲಿಗೆ ಓಡಾಡಬೇಕು. ತಕ್ಷಣ ಉಭಯ ಸರ್ಕಾರ ಇದನ್ನ ಪರಿಹರಿಸಬೇಕು. ಅವರು ಜೈ ಮರಾಠಿ ಅಂತಾರೆ, ನಾವು ಜೈ ಕನ್ನಡ ಅಂತ್ತೇವೆ. ಆದರೆ ವಾಸ್ತವವಾಗಿ ಜನರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ರು.
ಇದನ್ನು ಓದಿ : – RBI ರೆಪೊ ದರ 35 ಮೂಲಾಂಶ ಹೆಚ್ಚಳ- ದುಬಾರಿಯಾಗಲಿದೆ ವಾಹನ, ಗೃಹ ಸಾಲದ EMI