ಕಳೆದ 10 ದಿನಗಳಿಂದ ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗ್ತಿದೆ ಎಂದು ಸಿಎಂ ಬೊಮ್ಮಾಯಿ (Bommai) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ನೇರವಾಗಿ ಡಿಸಿಗಳ ಸಂಪರ್ಕ ಮಾಡಿ ಸೂಚನೆ ನೀಡಿದ್ದೇನೆ.
ನಾಳೆ ಕೊಡಗು (Kodagu) , ದಕ್ಷಿಣ ಕನ್ನಡ (Dakshina kannada) , ಉಡುಪಿ (Udupi) , ಕಾರವಾರಕ್ಕೆ ಭೇಟಿ ಕೊಡ್ತೀನಿ. ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಗಳ ಬಗ್ಗೆ ಸಭೆ ನಡೆಸುತ್ತೇನೆ. ಅಲ್ಲಿನ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿ ಅಲ್ಲೇ ಸೂಚನೆಗಳನ್ನ ನೀಡ್ತೇನೆ. ಇದನ್ನೂ ಓದಿ : – ತುಂಗಾಭದ್ರ ಗ್ರಾಮದಲ್ಲಿ ಜಿಟಿಜಿಟಿ ಮಳೆಗೆ ಮನೆ ಕುಸಿತ, ಇಬ್ಬರಿಗೆ ಗಂಭೀರ ಗಾಯ
ನಾಳೆ ಕೊಡಗು ಮತ್ತು ಮಂಗಳೂರು ಭೇಟಿ ಕೊಟ್ಟು. ನಾಳೆ ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡ್ತೀನಿ. ನಾಡಿದ್ದು ಕಾರವಾರ ಜಿಲ್ಲೆಗೆ ಭೇಟಿ ನೀಡ್ತೀನಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ಚಿಕ್ಕಮಗಳೂರಿನಲ್ಲಿ ಮಳೆಗೆ ಮಹಿಳೆ ಸಾವು – ಪ್ರವಾಸಿ ಸ್ಥಳಗಳಲ್ಲಿ ಕೆಲವು ವಾಹನಗಳಿಗೆ ನಿರ್ಬಂಧ