ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಿಜೆಪಿ (BJP) ನಾಯಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ (Congress) ಲೇವಡಿ ಮಾಡಿದೆ. ರೌಡಿಶೀಟರ್ ಗಳ ರೀತಿಯಲ್ಲೇ ಸಚಿವರಿಗೂ ಹೆಸರಿಟ್ಟು ಲೇವಡಿ ಮಾಡಲಾಗಿದೆ. ರೇಪ್ ರಮೇಶ (Ramesh) , ಸೆಕ್ಸಿ ಸುಧಾಕರ್ (K.Sudhakar) , ಸ್ಟ್ರಾಂಗ್ ಸದಾ ಎಂದು ಅಪಹಾಸ್ಯ ಮಾಡಲಾಗಿದೆ.
ಬ್ಲೇಡ್ ಅಶೋಕ, ನಟೋರಿಯಸ್ ನಾರಾಯಣ, ಡ್ರಾಗರ್ ಪ್ರತಾಪ ಎಂದು ವ್ಯಂಗ್ಯ ಮಾಡಲಾಗಿದೆ. ಸಿಎಂ ಬೊಮ್ಮಾಯಿಗೆ ಬಾಂಬೆ ಬೊಮ್ಮಣ್ಣ ಎಂದು ಅಪಹಾಸ್ಯ ಮಾಡಿ ಪೋಸ್ಟರ್ (Poster) ರಿಲೀಸ್ ಮಾಡಲಾಗಿದೆ. ಮುಂದೊಂದು ದಿನ ಬಿಜೆಪಿ ನಾಯಕರ ಹೆಸರುಗಳು ಹೀಗಿರಬಹುದು ಎಂದು ಲೇವಡಿ ಮಾಡಲಾಗಿದೆ. ಬಿಜೆಪಿ ಪಾತಕಿಗಳ ತವರು ಮನೆಯಾಗುತ್ತಿದೆ ಎಂದು ವ್ಯಂಗ್ಯ ಮಾಡಲಾಗಿದೆ. ಕಾಂಗ್ರೆಸ್ ನ ೪೦% ಸರ್ಕಾರ ಪೇಜ್ ನಲ್ಲಿ ಮತ್ತಷ್ಟು ಪೋಸ್ಟ್ ಗಳು ಈಗ ರಾರಾಜಿಸುತ್ತಿದೆ. ಬಿಜೆಪಿ ಯಲ್ಲಿ ಪಕ್ಷ ಸೇರ್ಪಡೆಗೆ ಏನೇನು ಅರ್ಹತೆಗಳಿರಬೇಕು ಅಂತ ಲಿಸ್ಟ್ ಮಾಡಲಾಗಿದೆ. ಬಿಜೆಪಿ ಸೇರ್ಪಡೆಯಾಗಲು ರೌಡಿಶೀಟರ್ ಆಗಿರಬೇಕು ಕನಿಷ್ಟ ೨೦ ಕೇಸುಗಳು ಇರಬೇಕು, ಕೊಲೆ ಕೇಸ್ ಇದ್ದರೆ ಉತ್ತಮ ಅತ್ಯಾಚಾರಿಯಾಗಿರಬೇಕು ಪೊಲೀಸ್ ವಾಂಟೆಡ್ ಲಿಸ್ಟ್ ನಲ್ಲಿರಬೇಕು ಹಫ್ತಾ ವಸೂಲಿಯಲ್ಲಿ ಪಳಗಿರಬೇಕು ಇಷ್ಟೆಲ್ಲ ಅರ್ಹೆತಗಳಿದ್ದರೆ ಬಿಜೆಪಿಗೆ ಸೇರ್ಪಡೆಗೊಳ್ಳಬಹುದು ಸೇರ್ಪಡೆಯಾದರೆ ೪೦% ಕಮಿಷನ್ (40 % Commission) ಗ್ಯಾರಂಟಿ ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ : – ನಾವು ಯಾವುದೇ ರೌಡಿಗಳನ್ನು ಪ್ರೋತ್ಸಾಹಿಸಲ್ಲ – ಸಿಎಂ ಬಸವರಾಜ್ ಬೊಮ್ಮಾಯಿ