ಜೋಡೆತ್ತು ಒಂದು ಎತ್ತು ಏರಿಗೆ ಮತ್ತೊಂದು ಎತ್ತು ನೀರಿಗೆ ಹೋಗುತ್ತದೆ. ಇದನ್ನು ಕಾಂಗ್ರೆಸ್ (Congress) ಎಂದು ಕರಿಯಬೇಕಾ ಎಂದು ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ (K.S eshwarappa) ಹೇಳಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು ಅಂದು ಕಾಂಗ್ರೆಸ್ ನಾಯಕ ಬರುತ್ತಾನೆಂದರೆ ಗೌರವ ಕೊಡುತ್ತಿದ್ದರು.
ಈಗ ಕಾಂಗ್ರೆಸ್ ನಾಯಕ ಬರುತ್ತಾನೆಂದರೆ ಲೂಟಿ ಮಾಡಲು ಬರುತ್ತಾರೆ ಎಂದು ಹೇಳಿದ್ರು. ಡಿ.ಕೆ. ಶಿವಕುಮಾರ್ , ಸಿದ್ದರಾಮಯ್ಯ ಇಬ್ಬರು ರಾಹುಲ್ ಗಾಂಧಿ ಕಾಟಕ್ಕೆ ಅಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಬಿಟ್ಟು ಓಡಿ ಹೋಗುತ್ತಿದ್ದಂತೆ. ಡಿ.ಕೆ ಶಿವಕುಮಾರ್ (DK.Shivkumar) , ಸಿದ್ದರಾಮಯ್ಯ (Siddaramaiah) ಇಬ್ಬರು ಎರಡು ದಿಕ್ಕಿಗೆ ಓಡಿ ಹೋಗುತ್ತಾರೆ, ನೊಡುತ್ತಾ ಇರಿ. ಭಾರತ್ ಜೋಡೋ ಯಾತ್ರೆಯಲ್ಲಿ 40 ಪರ್ಸೆಂಟೆಜ್ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾ ಹೋದರೆ, ಜನರು ನಂಬುತ್ತಾರಾ ಎಂದು ಪ್ರಶ್ನಿಸಿದ್ರು. ಮುಂದಿನ ಚುನಾವಣೆಯ ಪರೀಕ್ಷೆಯಲ್ಲಿ 25 ಪರ್ಸೆಂಟೆಜ್ ನೀವು ತೆಗೆದುಕೊಳ್ಳಲ್ಲ. ಅಸೆಂಬ್ಲಿ ಚುನಾವಣೆಯಲ್ಲಿ ಫೇಲಾಗುತ್ತಿರಿ. ನೂರಕ್ಕೆ 35 ಪರ್ಸೆಂಟೆಜ್ ತೆಗೆಯವುದಿಲ್ಲ. ಭಾರತ್ ಜೋಡೋ ಯಾತ್ರೆ ನಂತರ ನಡೆದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ಫೇಲಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ :- ಬೆಂಗಳೂರಿನಲ್ಲಿ ನಿಲ್ಲದ ಮಳೆಯ ಅಬ್ಬರ – ಜನಜೀವನ ಸಂಪೂರ್ಣ ಅಸ್ತವ್ಯಸ್ತ