ಹುಬ್ಬಳ್ಳಿಯ (Hubballi) ಪಶ್ಚಿಮ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ, ಎನ್ ಆರ್ ದೇಸಾಯಿ ರೊಟರಿ ಸ್ಕೂಲ್ ಗೆ (Desai rotary school) ಬಿಜೆಪಿ ಅಭ್ಯರ್ಥಿ (BJP Candidate) ಬಸವರಾಜ ಹೊರಟ್ಟಿ (Basavaraj horatti) ಭೇಟಿ ನೀಡಿದ್ದಾರೆ.
ಮತಗಟ್ಟೆಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಲ್ಲಾ ಕಡೆ ಓಡಾಡಿದ್ದೀನಿ , ಮೊದಲು ಲೀಡರ್ಸ್ ವೋಟ್ (Vote) ಹಾಕ್ತಾ ಇದ್ದಾರೆ. ಎಲ್ಲಾ ಕಡೆ ಎರಡೆರಡು ಟೀಮ್ ಮಾಡಿದೀವಿ ಎಲ್ಲರಿಗೂ 10 ಗಂಟೆಯ ಒಳಗೆ ಮತ ಹಾಕಲು ಹೇಳಲಾಗಿದೆ. 10 ಗಂಟೆಯ ನಂತರ ಬರದೇ ಇರೊರನ್ನ ಕರೆಸುವ ಯತ್ನ ಮಾಡ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ : – ರಾಹುಲ್ ಸೋನಿಯಾಗೆ ED ನೋಟಿಸ್ ಜಾರಿ ಖಂಡಿಸಿ ಕಾಂಗ್ರೆಸ್ ಹೋರಾಟ
ಭ್ರಷ್ಟಾಚಾರ ಆರೋಪ ವಿಚಾರ
ಭ್ರಷ್ಟಾಚಾರ ಆರೋಪಗಳ (Corruption alligation) ಬಗ್ಗೆ ಕಾನೂನು ಪ್ರಕಾರ ಉತ್ತರ ಕೊಡುತ್ತೇನೆ, ಭ್ರಷ್ಟಾಚಾರದ ವಿಚಾರ ನಾನು ಮೊದಲೇ ಹೇಳಿದ್ದೆ. ಭ್ರಷ್ಟಾಚಾರದ ಸಾಕ್ಷಿ ಕೊಟ್ಟರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದೆ. ಒಬ್ಬರೂ ಬಂದಿಲ್ಲ. ಕೇವಲ ಚುನಾವಣೆ ಬಂದಾಗ ಆರೋಪ ಮಾಡ್ತಾರೆ. 42 ವರ್ಷ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಒಂದು ವಾರದಿಂದ ಕೇವಲ ಆರೋಪ ಮಾಡ್ತಾ ಇದ್ದಾರೆ. ಮತದಾನದ ಒಟ್ಟು 70 % ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಈ ಬಾರಿ ಬಸವರಾಜ ಹೊರಟ್ಟಿ ಲೆಕ್ಕಾಚಾರ ತಲೆ ಕೆಳಗಾಗಲಿದೆ – ಬಸವರಾಜ ಗುರಿಕಾರ