ಈ ಬಾರಿ ದೀಪಾವಳಿ (Deepavali) ಹಬ್ಬ ಕೆಲವರ ಬಾಳಲ್ಲಿ ಅಂಧಕಾರ ಮೂಡಿಸಿದೆ. ಬೆಂಗಳೂರಿನಲ್ಲಿ 6 ಜನರ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ನಾರಾಯಣ ನೇತ್ರಾಲಯದ (Narayana Netralaya) ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗಶೆಟ್ಟಿ (Dr Bhajunga shetty) ಸುದ್ದಿಗೋಷ್ಠಿ ನಡೆಸಿ ಪಟಾಕಿ ಸಿಡಿತದಿಂದ ಆಸ್ಪತ್ರೆಗೆ ದಾಖಲಾದವರ ಮಾಹಿತಿ ನೀಡಿದರು.
ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದರು. 50ಕ್ಕೂ ಹೆಚ್ಚು ಪಟಾಕಿ ಸಿಡಿತದ ಕೇಸ್ಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ಇದರಲ್ಲಿ 6 ಜನರಿಗೆ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ಈ 6 ಜನರು ಸಂಪೂರ್ಣ ದೃಷ್ಠಿ (Eye sight Loss) ಕಳೆದುಕೊಂಡಿದ್ದಾರೆ. ಇವರಿಗೆ ನೇತ್ರದಾನಿಗಳ ಕಣ್ಣು ಹಾಕಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ. 50 ಜನರ ಪೈಕಿ 38 ಜನರು ಪುರುಷರು, 12 ಜನ ಮಹಿಳೆಯರ ಕಣ್ಣಿಗೆ ಹಾನಿಯುಂಟಾಗಿದೆ. ಇದರಲ್ಲಿ 26 ಜನರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 26 ಜನರು ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಪಟಾಕಿ ಸಿಡಿಸದೇ 24 ಜನರ ಕಣ್ಣಿಗೆ ಹಾನಿಯಾಗಿದೆ. ಇವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಹಚ್ಚಿದ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಪಟಾಕಿಯಿಂದ ಕೇವಲ ಕಣ್ಣಿಗೆ ಮಾತ್ರವಲ್ಲ, ಮನುಷ್ಯರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಇದನ್ನೂ ಓದಿ :- TRS BREAKING – ತೆಲಂಗಾಣದಲ್ಲಿ TRS ಶಾಸಕರ ಖರೀದಿಗೆ ಯತ್ನ- 15 ಕೋಟಿ ಜೊತೆ ನಾಲ್ವರು ವಶಕ್ಕೆ
ಪರಿಸರ ಮಾಲಿನ್ಯಕ್ಕೂ ಈ ಪಟಾಕಿ ಕಾರಣವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಪೋಷಕರು ಆದಷ್ಟು ಪಟಾಕಿಯಿಂದ ಮಕ್ಕಳನ್ನು ದೂರ ಇಡಬೇಕು. ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವುದೇ ಒಳ್ಳೆಯದು ಎಂದು ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ :- ಕಾಂಗ್ರೆಸ್ ಪಾದಯಾತ್ರೆ ಅಸ್ತಿತ್ವ ಉಳಿಸಿಕೊಳ್ಳಲು ಮಾತ್ರ – ಆರ್.ಅಶೋಕ್