ಮಹಾರಾಷ್ಟ್ರ ( MAHARASTRA ) ದ ಒತ್ತಾಯ ಮೇರೆಗೆ ಮಹಾಜನ್ ಆಯೋಗ ರಚನೆ ಆಯ್ತು. 1967ರ ಆಗಸ್ಟ್ ನಲ್ಲಿ ಮಹಾಜನ್ ಆಯೋಗ ವರದಿ ನೀಡಿತು. ಮಹಾರಾಷ್ಟ್ರ ವರದಿಯನ್ನ ತಿರಸ್ಕರಿಸಿತು, ಕರ್ನಾಟಕ ಸ್ವಾಗತ ಮಾಡಿತ್ತು. ಮಹಾರಾಷ್ಟ್ರದವರು ರಾಜಕೀಯಕ್ಕೆ ಗಡಿ ವಿಚಾರ ಜೀವಂತವಾಗಿಟ್ಟಿದ್ದಾರೆ. ಯಾವುದೇ ಗಡಿ ವಿವಾದ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ( SIDDARAMAIAH ) ಹೇಳಿದ್ರು.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಸಭೆಗೆ ಸಿಎಂ ಹೋಗಬಾರದಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( SIDDARAMIAAH ) ಅಸಮಾಧಾನ ವ್ಯಕ್ತಪಡಿಸಿದರು. ಗಡಿ ವಿವಾದ ಇದೆ ಎಂದು ತೋರಿಸುವುದು ಮಹಾರಾಷ್ಟ್ರದ ಉದ್ದೇಶ. ತ್ರಿಬಲ್ ಇಂಜಿನ್ ಸರ್ಕಾರ ಇದೆ. ಗಡಿ ವಿವಾದ ನಿವಾರಣೆ ಮಾಡಬೇಕಾಗಿರುದು ಅವರ ಜವಾಬ್ದಾರಿ ಅಲ್ಲವೇ? ಕೇಂದ್ರ ಕೂಡಲೇ ಮಧ್ಯಪ್ರವೇಶ ಮಾಡಿ ಬಾಯಿ ಮುಚ್ಚಿಕೊಂಡು ಇರಿ, ಗೂಂಡಾಗಿರಿ, ಪುಂಡಾಟಿಕೆ ಮಾಡುವುದು ಬಿಡಿ ಎಂದು ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡಬೇಕಿತ್ತು ಎಂದರು.
ಇದಕ್ಕೆ ಸಿಎಂ ಬೊಮ್ಮಾಯಿ ( BASAVARAJ BOMMAI ) ಉತ್ತರ ನೀಡಿ, ಮರಾಠಿ ಮಾತನಾಡುವ ಕರ್ನಾಟಕದ ಊರುಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರದ ಸಿಎಂ ಹೇಳಿದಾಗ ನಾನು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಮಂತ್ರಿಗಳು ಬೆಳಗಾವಿಗೆ ಬರುವ ಪ್ರಯತ್ನ ಮಾಡಿದಾಗಲೂ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದರು. ಗಡಿ ವಿಷಯದಲ್ಲಿ ನಾನು ಒಂದೇ ಧ್ವನಿಯಲ್ಲಿ ಮಾತಾಡಿದ್ದೇನೆ. ಅತ್ಯಂತ ಜವಾಬ್ದಾರಿಯಿಂದ ಮಾತಾಡ್ತಿದ್ದೇನೆ. ಸ್ವಲ್ಪ ಸಮಸ್ಯೆಯಾದ್ರೂ ಏನಾಗುತ್ತೆ ಎಂದು ನಿಮಗೂ ಗೊತ್ತಿದೆ. ಮಹಾರಾಷ್ಟ್ರ ಕೇಸ್ ಗೊತ್ತಾದ ಮೇಲೆ ತೀಕ್ಷ್ಣವಾಗಿ ಉತ್ತರಿಸಿದ್ದೆ. ಮಹಾರಾಷ್ಟ್ರ ಸಚಿವರ ಭೇಟಿ ಕುರಿತು ಸೂಕ್ಷ್ಮವಾಗಿ ಹೇಳಿದ್ದೆ. ಆದ್ರೆ ಅವರು ಬರಲು ತವಕಿಸಿದಾಗ ಸಿಎಸ್ ಮೂಲಕ ಹೇಳಿಸಿದೆ. ನಮ್ಮ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದು ಎಂದು ಹೇಳಿದರು. ಇದನ್ನು ಓದಿ :- ಒಂದು ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ತಾಜ್ ಮಹಲ್ ..! ಪ್ರೇಮಸೌಧಕ್ಕೆ ಸಂಕಷ್ಟ…
ವಿಧಾನಸಭೆಯಲ್ಲಿ ನಿಯಮ 69ರಡಿ ಗಡಿ ವಿವಾದ ಕುರಿತು ಚರ್ಚೆ ನಡೆದಿದ್ದು, ನಾಳೆ ಸರ್ಕಾರ ಉತ್ತರ ಕೊಡುವಾಗ ಗಡಿ ವಿಚಾರದಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳಿಸೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸಿಎಂ ಹೇಳಿಕೆಗೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ನಿರ್ಣಯ ತನ್ನಿ ಅಂಗೀಕರಿಸಿ ಕಳಿಸೋಣವೆಂದು ಹೇಳಿದರು.
ಇದನ್ನು ಓದಿ :- ರಾಜಸ್ಥಾನದಲ್ಲಿ LPG ಸಿಲಿಂಡರ್ ದರ ಅರ್ಧಕ್ಕಿಂತ ಹೆಚ್ಚು ಇಳಿಕೆ, ಅಶೋಕ್ ಗೆಹ್ಲೋಟ್ ಘೋಷಣೆ