ಬೆಂಗಳೂರನ್ನ ಏನ್ ಮಾಡಿದ್ದಾರೆ ಗೊತ್ತಿಲ್ವಾ.? – ಸುಧಾಕರ್ ವಿರುದ್ದ ಹೆಚ್ಡಿಕೆ ಗುಡುಗು

ಜೆಡಿಎಸ್ (JDS) ನ ಪಂಚರತ್ನ ರಥಯಾತ್ರೆ (Pancharatna yatre) ಯು 13ನೇ ದಿನಕ್ಕೆ ಕಾಲಿಟ್ಟಿದೆ. ಪಂಚರತ್ನ ರಥಯಾತ್ರೆಯು ಇಂದು ನೆಲಮಂಗಲಕ್ಕೆ ತಲುಪಿದೆ. ನಂತರ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD.Kumarswamy) , ಆರೋಗ್ಯ ಸಚಿವ ಸುಧಾಕರ್ (Sudhakar) ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಜೆಡಿಎಸ್ (JDS) ನ ಪಂಚರತ್ನ ರಥಯಾತ್ರೆ (Pancharatna yatre) ಯು 13ನೇ ದಿನಕ್ಕೆ ಕಾಲಿಟ್ಟಿದೆ. ಪಂಚರತ್ನ ರಥಯಾತ್ರೆಯು ಇಂದು ನೆಲಮಂಗಲಕ್ಕೆ ತಲುಪಿದೆ. ನಂತರ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD.Kumarswamy) , ಆರೋಗ್ಯ ಸಚಿವ ಸುಧಾಕರ್ (Sudhakar) ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Karnataka Medical Education Minister K Sudhakar's father, domestic help  test positive for coronavirus | Deccan Herald

ನೆಲಮಂಗಲ ಸ್ಯಾಟಲೈಟ್ ಸಿಟಿ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮೂರೂವರೆ ವರ್ಷಗಳಿಂದ ಮಾಡದವರು 3 ತಿಂಗಳಿಂದ ಮಾಡ್ತಾರಾ..? 2006ರಲ್ಲಿ ನಾನು ಸಿಎಂ ಆಗಿದ್ದಾಗ 3 ಸ್ಯಾಟ್ ಲೈಟ್ ನಗರ ಮಾಡಲು ಮುಂದಾದೆ. ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್ ವಿರೋಧಿಸಿತ್ತು.
ಈಗ ಬೆಂಗಳೂರ (Bengaluru) ನ್ನ ಏನ್ ಮಾಡಿದ್ದಾರೆ ಗೊತ್ತಿಲ್ವಾ.? ನೆಲಮಂಗಲ (Nelamangala) ಈಗಾಗಲೇ ಸಾಕಷ್ಟು ಬೆಳದಿದೆ. ನೆಲಮಂಗಲ ಈಗಾಗಲೇ ಬೆಂಗಳೂರಿಗೆ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್ ಟೌನ್ ಮಾಡೋದು. ಬಹುಷ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ಸುಧಾಕರ್ ವಿರುದ್ದ ವ್ಯಂಗ್ಯವಾಡಿದ್ದಾರೆ.

Image

ನಾನು ಕಾಂಪಿಟ್ ಟೂ ಚೈನಾ ಅಂತ ಕಾರ್ಯಕ್ರಮ ಮಾಡಿದ್ದೆ. ಆದ್ರೆ ಬಿಜೆಪಿ (BJP) ಯವರು ಬಂದು ರದ್ದು ಮಾಡಿದ್ರು. ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಕಾರ್ಯಕ್ರಮ ನೀಡಿದೆ. ಅದನ್ನೂ ಕೂಡ ಬಿಜೆಪಿ ಸರ್ಕಾರ ರದ್ದು ಮಾಡಿದ್ರು. ಒಂದು ಬಾರಿ ಸ್ವಾತಂತ್ರ್ಯ ಸರ್ಕಾರಕ್ಕೆ ಅವಕಾಶ ನೀಡಿದ್ರೆ. ಪಂಚರತ್ನ ಯೋಜನೆ ಜಾರಿಗೆ ತರ್ತೀವಿ. ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಾಲ ಮನ್ನ ಮಾಡಿ ಕೊಡಿ ಅಂತ ಮನವಿ ಮಾಡ್ತಿದ್ದಾರೆ. ನೀವು ಅಧಿಕಾರ ನೀಡಿದ್ರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀ ಶಕ್ತಿ (Stri shakthi) ಸಾಲ ಮನ್ನಾ ಮಾಡ್ತೀವಿ. ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಿದ್ರೆ ಯುವಕರು ಚಪ್ಪಾಳೆ ತಟ್ಟಿದ್ರು. ಯಾಕ್ರಪ್ಪ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಿದ್ರೆ, ನಿವ್ಯಾಕೆ ಚಪ್ಪಾಳೆ ಹೊಡೀತಿದ್ದೀರಾ ಅಂತ. ಅದಕ್ಕೆ ಯುವಕರು ಉತ್ತರ ಕೊಟ್ರು. ಸಾಲ ಅವರೇ ತಂದ್ರು, ನಾವೇ ಉಪಯೋಗಿಸಿಕೊಳ್ಳೋದು ಅಂದ್ರು. ಮುಸ್ಲಿಂ ಅಂಗಡಿಯಲ್ಲಿ ವ್ಯಾಪಾರ ಮಾಡಬೇಡಿ ಅಂದ್ರು. ಅಲ್ಲೆಲ್ಲೋ ಕುಕ್ಕರ್ ಬ್ಲಾಸ್ಟ್ ಅಂದ್ರು. ಅವರ್ಯಾರೋ ಅಮಾಯಕರು ಸಾಯ್ತಿರೋದು. ಇದರಿಂದ ಬಡವರು ಬೀದಿ ಪಾಲಾಗ್ತಿದ್ದಾರೆ. ಇದನ್ನೂ ಓದಿ : – ಕಳ್ಳತನ ಮಾಡುವರು ನೀವೇ…ಪೊಲೀಸರು ಆಗುವರು ನೀವೇ – ಎಂ.ಬಿ ಪಾಟೀಲ್

Image

ಮುಸ್ಲಿಂ( Muslim) ಸಮಾಜಕ್ಕೆ ಕಾಂಗ್ರೆಸ್ ನಾಯಕರು ಹೇಳಿದ್ರು ಜೆಡಿಎಸ್ ಗೆ ಮತ ನೀಡಬೇಡಿ ಅಂತ. ಬಿಜೆಪಿ ಸರ್ಕಾರ ಬರೋದಕ್ಕೆ ಇದೇ ಕಾಂಗ್ರೆಸ್ ನವರೇ ಕಾರಣ. ಅಲ್ಲೆಲ್ಲೋ ಕುರುಬರಿಗೆ ಸಿಎಂ ಹೇಳಿದ್ದಾರೆ. ಕುರುಬರಿಗೆ 24 ಕೋಟಿ ಸಾಲ ಕೊಡ್ತೀವಿ ಅಂತ. ಅದರಿಂದ ರೈತರು ಸಾಲಗಾರರಾಗ್ತಾರೆ. ಅದರಿಂದ ಮತ್ತೆ ನಾನೇ ಬರಬೇಕು ಸಾಲ ಮನ್ನ ಮಾಡೋಕೆ.
ಇಲ್ಲಿರೋ ಕಾಂಟ್ಯಾಕ್ಟರ್ ಗೆ ಪ್ರಶ್ನೆ ಮಾಡ್ತೀನಿ. ಇಲ್ಲಿ ಕೆಲಸ ಮಾಡೋದಕ್ಕೆ 40% ಕೊಟ್ಟಿದ್ದೀರಾ.? ಹಾಗಾದ್ರೆ ಯೋಚನೆ ಮಾಡಬೇಡಿ, ಅಂತ ಅಕ್ರಮಕ್ಕೆ ಕಡಿವಾಣ ಹಾಕ್ತೀನಿ. ಮುಂದೆ ಅಧಿಕಾರಕ್ಕೆ ಬಂದ್ರೆ ಇಂತ ಕಮೀಷನ್ ದಂಧೆಗೆ ಕಡಿವಾಣ ಹಾಕ್ತೀನಿ ಎಂದು ಹೇಳಿದ್ರು.

ಇದನ್ನೂ ಓದಿ : –  ಬೆಂಗಳೂರಿನಲ್ಲಿ 22 ಲಕ್ಷ ನಗದು, ಒಂದು ಕೆಜಿ ಚಿನ್ನಾಭರಣ ಪತ್ತೆ…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!