ರಾಜ್ಯದಲ್ಲೀಗ ಮುಂಗಾರು ಬಿತ್ತನೆ ಪೂರ್ವ ಕಾರ್ಯಗಳು ಚುರುಕು ಪಡೆದುಕೊಂಡಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ (Fertilizer) ರೈತರು (Farmers) ಪರದಾಡುವಂತಹ ಪರಿಸ್ಥಿತಿ ಬಂದಿದೆ.
ಅದರಲ್ಲಿಯೂ ಧಾರವಾಡ (Dharwad) ಜಿಲ್ಲೆಯಲ್ಲಿ ಬಿತ್ತನೆ ಬೀಜ ಸಿಕ್ಕರೂ ರೈತರಿಗೆ ಸರಿಯಾಗಿ ಡಿಎಪಿ ರಸಗೊಬ್ಬರ ಸಿಗುತ್ತಿಲ್ಲ. ಹೀಗಾಗಿ ಇವತ್ತು ಧಾರವಾಡದಲ್ಲಿ ರೈತರು ತಮಗೆ ಬೇಕಾದ ರಸಗೊಬ್ಬರ ಪಡೆಯಲು ದೊಡ್ಡ ಹೋರಾಟವನ್ನೇ ಮಾಡಬೇಕಾಯ್ತು. ಧಾರವಾಡ ಜಿಲ್ಲೆಯಲ್ಲಿಯೂ ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈ ಸಲ ಜಿಲ್ಲೆಯಲ್ಲಿ ಸುಮಾರು 2 ಲಕ್ಷ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು (Rain )ಬಿತ್ತನೆಯಾಗಲಿದೆ. ಹೀಗಾಗಿ ಆದಷ್ಟು ಬೇಗ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳಬೇಕೆಂದು ರೈತರು (Farmers) ಸಹಕಾರ ಸೊಸೈಟಿಗಳಿಗೆ (Society) ಅಲೆದಾಡುತ್ತಿದ್ದಾರೆ. ಆದ್ರೆ ಡಿಎಪಿ ರಸಗೊಬ್ಬರ ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಬಹುತೇಕ ಕಡೆ ಸ್ಟಾಕ್ ಇಲ್ಲ ಅಂತಾನೇ ಹೇಳುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಸ್ಟಾಕ್ ಇದೆ ಅಂತಾರೆ. ಇದನ್ನೂ ಓದಿ : – ದಾಂಧಲೆ ನಡೆಸಿದವರನ್ನ ಬಂಧಿಸುವ ಬದಲು ಕಂಡಲ್ಲಿ ಗುಂಡಿಕ್ಕಿ – ಸೊಗಡು ಶಿವಣ್ಣ
ಈ ಗೊಂದಲದ ಮಧ್ಯೆ ಇಂದು ಸೊಸೈಟಿಗಳಿಗೆ ಬಂದಿದ್ದ ರೈತರು ಗೊಬ್ಬರ ಇಲ್ಲ ಅಂತಾ ಹೇಳಿದ ಕಾರಣಕ್ಕೆ ಧಾರವಾಡದ ಶಾಸಕ ಅರವಿಂದ ಬೆಲ್ಲದ್ ನಿವಾಸಕ್ಕೆ ದಿಢೀರ ಮುತ್ತಿಗೆ ಹಾಕಿದ್ರು, ಈ ವೇಳೆ ಕೃಷಿ ಅಧಿಕಾರಿಗಳು ಹಾಗೂ ಶಾಸಕರ ಆಪ್ತ ಸಹಾಯಕರು ಸ್ಥಳಕ್ಕಾಗಮಿಸಿ ರೈತರ ಅಹವಾಲು ಸ್ವೀಕರಿಸಿದರು. ಆದ್ರೆ ಅಧಿಕಾರಿಗಳು ಸ್ಟಾಕ್ ಇದೆ ಬನ್ನಿ ತೋರಿಸ್ತೇವಿ ಅಂತಾ ಹೇಳಿದ್ದರಿಂದ ಇಡೀ ಪ್ರತಿಭಟನೆ ಹಳೇ ಎಪಿಎಂಸಿ ಆವರಣದ ತಾಲೂಕು ಹುಟ್ಟುವಳಿ ಸಹಕಾರ ಸಂಘದ ಗೋದಾಮಿಗೆ ಶಿಫ್ಟ್ ಆಯ್ತು. ಅಲ್ಲಿಗೆ ಅಧಿಕಾರಿಗಳು ಬಂದ ವೇಳೆಯಲ್ಲೇ ಒಂದೇ ಲೋಡ್ ಬಂದಿತ್ತು. ಹೀಗಾಗಿ ಪುನಃ ರೈತರು ಆಕ್ರೋಶ ವ್ಯಕ್ತಪಡಿಸಿ, ಸೊಸೈಟಿ ಎದುರಿನಲ್ಲಿಯೇ ಧರಣಿ ಕುಳಿತರು. ಒಟ್ಟಾರೆಯಾಗಿ ಸದ್ಯ ಮುಂಗಾರು ಆರಂಭಗೊಂಡಿರೋ ಹೊತ್ತಿನಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರ ಗದ್ದಲ ಜೋರಾಗಿದ್ದು, ರೈತರು ನಿತ್ಯವೂ ಹೋರಾಟ ಮಾಡಿಯೇ ಗೊಬ್ಬರ ಪಡೆಯಬೇಕಾದ ಸ್ಥಿತಿಯಿದ್ದು, ಸದ್ಯ ರೈತರು ಅಕ್ಷರಷಃ ರೋಷಿ ಹೋಗಿದ್ದಾರೆ. ಇದನ್ನೂ ಓದಿ : – ದಾಂಧಲೆ ನಡೆಸಿದವರನ್ನ ಬಂಧಿಸುವ ಬದಲು ಕಂಡಲ್ಲಿ ಗುಂಡಿಕ್ಕಿ – ಸೊಗಡು ಶಿವಣ್ಣ